ಕೊಕ್ಕಡ : ಕಾಡಾನೆಗಳ ಸಂಚಾರ; ಭಯಬೀತರಾದ ಸಾರ್ವಜನಿಕರು

ಶೇರ್ ಮಾಡಿ

ಕೊಕ್ಕಡ: ಕಳೆದ ಕೆಲವು ದಿನಗಳಿಂದ ಪಟ್ಲಡ್ಕ, ಕಾಪಿನಬಾಗಿಲು, ಕುಂಡಡ್ಕ ಪರಿಸದಲ್ಲಿ ರಾತ್ರಿ ವೇಳೆ ಕೃಷಿ ತೋಟಗಳಿಗೆ ದಾಳಿ ಮಾಡುತ್ತಿದ್ದ ಕಾಡಾನೆಯು, ಇಂದು ಬೆಳಗಿನಿಂದಲೇ ಮಾಯಿಲಕೋಟೆ ಪರಿಸರದಲ್ಲಿ ಸಂಚರಿಸುತ್ತಿವೆ.

ಮೂರು ಕಾಡಾನೆಗಳು ಇವೆ ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ. ಸಾರ್ವಜನಿಕರು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ.
ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಾ, ಈ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮಾಹಿತಿಯನ್ನು ನೀಡುತ್ತಿದ್ದಾರೆ.

Leave a Reply

error: Content is protected !!