ಅಕ್ರಮ ಕಾಸಾಯಿಖಾನೆಗೆ ಪೊಲೀಸರ ದಾಳಿ: ಆರೋಪಿ ಅಜೀದ್ ವಶಕ್ಕೆ

ಶೇರ್ ಮಾಡಿ

ವೇಣೂರು: ಮರೋಡಿ ಗ್ರಾಮದ ಅಜೀದ್ ಎಂಬವನು ಮನೆಯಲ್ಲಿ ಇಂದು ಅಕ್ರಮವಾಗಿ ಗೋಮಾಂಸವನ್ನು ಮಾಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದ್ದು ಕೂಡಲೇ ಪೋಲೀಸ್ ಠಾಣೆಗೆ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯಿಂದ ಪೊಲೀಸರು ಆಟೋರಿಕ್ಷಾ ಹಾಗೂ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಕೆಲವಡೆ ನಡೆಯುವ ಅಕ್ರಮ ಕಾಸಾಯಿಖಾನೆ ನಡೆಸುವುವವರನ್ನು ಪತ್ತೆ ಹಚ್ಚಿ ಅವರ ಆವರಣವನ್ನು ಮುಟ್ಟುಗೋಲು ಹಾಕಬೇಕು. ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವೇಣೂರು ಪೋಲೀಸ್ ಠಾಣೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡ ಮನವಿಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಗುರುರಾಜ್ ಬಂಟ್ವಾಳ, ವೇಣೂರು ಪ್ರಖಂಡ ಬಜರಂಗದಳ ಸಂಯೋಜಕ ಸಂತೋಷ್ ಮಂಜಿಲ ಮತ್ತು ಪ್ರಮುಖರಾದ ಸಂತೋಷ್ ಕೊಕ್ರಾಡಿ, ನಿರಂಜನ್ ಕೊಕ್ರಾಡಿ ಹಾಗೂ ಸಂಘಟನೆಯ ಸದಸ್ಯರು ಇದ್ದರು.

Leave a Reply

error: Content is protected !!