ಪೆರ್ಲಬೈಪಾಡಿ : ಶಾಸಕ ಹರೀಶ್ ಪೂಂಜರ ಗೆಲುವಿನ ಪ್ರಯುಕ್ತ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ.

ಶೇರ್ ಮಾಡಿ

ಪೆರ್ಲಬೈಪಾಡಿ: ಮೇ 19 ಬಂದಾರು ಗ್ರಾಮದ ಪೆರ್ಲಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹೊನ್ನಪ್ಪ ಗೌಡ ಸೋಣಕುಮೆರು ಇವರ ನೇತೃತ್ವದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರ ಗೆಲುವಿನ ಪ್ರಯುಕ್ತ ರಂಗ ಪೂಜೆ ಸೇವೆ‌ಯು ನಡೆಯಿತು.

ಈ ಸಂಧರ್ಭದಲ್ಲಿ ಪ್ರಮುಖರಾದ ಮಹಾಬಲ ಗೌಡ ನಾಗಂದೋಡಿ, ಸೀತರಾಮ‌ ಬೆಳಾಲು, ಡೀಕಯ್ಯ ಗೌಡ ಕಂಚರೊಟ್ಟು, ಬಾಲಕೃಷ್ಣ ಗೌಡ ಪಾಪುದಡ್ಕ, ಕೇಶವ ಗೌಡ ಕೊಂಗುಜೆ , ಆದಪ್ಪ ಗೌಡ ಹಾರ್ತ್ಯಾರು, ನಾರಾಯಣ ಗೌಡ ಪಯ್ಯೋಡಿ, ಲೋಹಿತ್ ಸೋಣಕುಮೆರು, ಸಂಪತ್‌ ಕರ್ಲೋಡಿ, ದೇಜಪ್ಪ ಪಯ್ಯೋಡಿ, ಚಿದಾನಂದ ಬಾಲಂಪಾಡಿ

ಹಾಗೂ ದೇವದುರ್ಲಭ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!