ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯ: ಇಂದು ಬೆಳಿಗ್ಗೆ ಅವರ ಶವ ಬಾವಿಯಲ್ಲಿ ಪತ್ತೆ:ಸ್ಥಳಕ್ಕೆ ಪೊಲೀಸರ ಆಗಮನ

ಶೇರ್ ಮಾಡಿ

ಅರಸಿನಮಕ್ಕಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಅರಸಿನಮಕ್ಕಿ ಯಲ್ಲಿ ನಡೆದಿದೆ.

ಇಲ್ಲಿಯ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯ(40ವ.)ರವರು ಎರಡು ದಿನದಿಂದ ನಾಪತ್ತೆಯಾಗಿದ್ದು, ಇಂದು (ಜು.30)ಬೆಳಗ್ಗೆ ಅವರ ತಂದೆ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ತಂದೆ ತಾಯಿ ಅಕ್ಕಾಪಕ್ಕದಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದು ಹರೀಶ್ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು. ಹರೀಶ್ ಅವಿವಾಹಿತರು. ಹರೀಶ್ ಆಚಾರ್ಯ ಅವರು ಆಕಸ್ಮಿಕವಾಗಿ ‌ಬಾವಿಗೆ ಬಿದ್ದರೊ, ಅಥವಾ ಇನ್ನೇನಾದರೂ ಘಟನೆ ನಡೆದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!