ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಈಚರ್‌ ಲಾರಿ ಢಿಕ್ಕಿ ; ಜಖಂ

ಶೇರ್ ಮಾಡಿ

ಚಾಲಕನ ನಿಯಂತ್ರಣ ತಪ್ಪಿದ ಈಚರ್‌ ಲಾರಿಯೊಂದು ರಸ್ತೆ ಬದಿಯ ಕಾಂಪೌಂಡ್‌ಗೆ ಢಿಕ್ಕಿ ಹೊಡೆದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ರವಿವಾರ ಸಂಭವಿಸಿದೆ.

ಮೈಸೂರಿನಿಂದ ಮಂಗಳೂರಿಗೆ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್‌ ಲಾರಿ ಕದಿಕಡ್ಕದ ಬಿ.ಸಿ.ಸಿ. ಚಿಕನ್‌ ಸೆಂಟರ್‌ ಬಳಿಯ ತಿರುವಿನಲ್ಲಿರುವ ಸಿದ್ಧಿಕ್‌ ಎಂಬವರ ಮನೆಯ ಕಾಂಪೌಂಡ್‌ಗೆ ಢಿಕ್ಕಿ ಹೊಡೆದಿದ್ದು, ಮನೆ ಮಾಲಕರಿಗೆ ನಷ್ಟ ಸಂಭವಿಸಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ.

Leave a Reply

error: Content is protected !!