ಬ್ಯಾಂಕ್‌ ಅಧಿಕಾರಿಯ ಮೃತದೇಹ ಖಾಸಗಿ ಹೋಟೆಲ್‌ ನ ಈಜುಕೊಳದಲ್ಲಿ ಪತ್ತೆ

ಶೇರ್ ಮಾಡಿ

ಮಂಗಳೂರು ನಗರದ ಖಾಸಗೊ ಹೊಟೇಲ್‌ನ ಈಜು ಕೊಳದಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಮೃತಪಟ್ಟ ಅಧಿಕಾರಿಯಾಗಿದ್ದಾರೆ.

ನಗರದ ಪ್ರತಿಷ್ಠಿತ ಹೊಟೇಲ್ ಈಜುಕೊಳದಲ್ಲಿ ಈ ಯೂನಿಯನ್ ಬ್ಯಾಂಕ್‌ ಅಧಿಕಾರಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ‌. ಇವರು ರವಿವಾರ ಮಂಗಳೂರಿಗೆ ಆಗಮಿಸಿ ಈ ಹೊಟೇಲ್‌ನಲ್ಲಿ ತಂಗಿದ್ದು, ಸಂಜೆ 4ರ ವೇಳೆ ಹೊಟೇಲ್ ರೂಮ್‌ನಿಂದ ಹೊರ ಹೋಗಿದ್ದರು ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!