ಕಾಡಾನೆ ದಾಳಿ, ಕೃಷಿ ನಾಶ

ಶೇರ್ ಮಾಡಿ

ಸುಳ್ಯ:ತಾಲೂಕಿನ ಮಂಡೆಕೋಲು ಗ್ರಾಮ ದಲ್ಲಿ ತೋಟಗಳಿಗೆ ಕಾಡಾನೆ ದಾಳಿ ಮುಂದುವರಿದಿದೆ.

ಕಳೆದ ವಾರ ಇಲ್ಲಿನ ಚಾಕೋಟೆ ಭಾಗದ ತೋಟಗಳಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಕೃಷಿ ಹಾನಿಗೊಳಿಸಿತ್ತು. ಈ ವಾರ ದಲ್ಲಿ ಮೂರು ದಿನಗಳಿಂದ ಚಾಕೋಟೆ, ಬೊಳುಗಲ್ಲು ಭಾಗದಲ್ಲಿ ಆನೆಗಳು ಕೃಷಿ ಹಾನಿ ಮಾಡಿವೆ.

ಜಗದೀಶ್‌ ಅವರ ತೋಟದಲ್ಲಿ ತೆಂಗಿನ ಗಿಡ, ಅಡಿಕೆ ಮರ, ಬಾಳೆ ಗಿಡಗಳನ್ನು ಮಗುಚಿ, ಹಾನಿಗೊಳಿಸಿವೆ. ನೀರಾವ‌ರಿ ಪೈಪ್‌ಗ್ಳನ್ನು ಪುಡಿ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!