ಕಾರು ಬಸ್ಸು ಅಪಘಾತ : ಪ್ರಯಾಣಿಕರಿಗೆ ಗಾಯ

ಶೇರ್ ಮಾಡಿ

ನೆಲ್ಯಾಡಿ: ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದ ಕಾರು ಬಸ್ ಅನ್ನು ಓವರ್ ಟೆಕ್ ಮಾಡುವ ಸಂದರ್ಭ ಬಸ್ಸಿನ ಹಿಂಬದಿಗೆ ಗುದ್ದಿದ ಘಟನೆ ಶಿರಾಡಿ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಡಿ 17 ರ ಬೆಳಿಗ್ಗೆ ಸಂಭವಿಸಿದೆ.

ಗಾಯಾಳುಗಳನ್ನು ಬೆಂಗಳೂರಿನ ಬನಶಂಕರಿ ಲೇ ಔಟ್ ನ ಮಹೇಶ್ (28) ,ಅಭಿಷೇಕ್ (30 ), ಮುತ್ತು ರಾಜ್( 30 ), ನವೀನ್ (29) ಎಂದು ಗುರುತಿಸಲಾಗಿದ್ದು ಮಹೇಶ್ ಎಂಬುವರಿಗೆ ಕಣ್ಣು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ. ಇನ್ನುಳಿದಂತೆ ಇತರರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು  ಶಿರಾಡಿಯ 108 ಆಂಬುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

error: Content is protected !!