ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿನಿ ನಿಧನ!

ಶೇರ್ ಮಾಡಿ

ತೀವ್ರ ಅನಾರೋಗ್ಯದಿಂದಾಗಿ ಕಾಲೇಜಿ ವಿದ್ಯಾರ್ಥಿನಿ ನಿಧನ.
ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕರವರ ಪುತ್ರಿ ತೃಪ್ತಿ ಮೃತಪಟ್ಟ ಯುವತಿ.

ಈಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದು. ತೃಪ್ತಿ ಎರಡು ದಿನಗಳಿಂದ ಅನಾರೋಗ್ಯದಿಂದ ಇದ್ದು, ಆಕೆಯನ್ನು ನಿನ್ನೆ ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಜ 11ರಂದು ರಾತ್ರಿ ಮೃತ ಪಟ್ಟಿರುವುದ್ದಾಗಿ ವರದಿಯಾಗಿದೆ.

Leave a Reply

error: Content is protected !!