ಜೆಸಿಐ ನೆಲ್ಯಾಡಿ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಆಗಿ ನೆಲ್ಯಾಡಿ ಮೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ ರಮೇಶ್.ಬಿ

ಶೇರ್ ಮಾಡಿ

ನೆಲ್ಯಾಡಿ ಮೆಸ್ಕಾಂ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್.ಬಿ ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಇಲಾಖಾ ವತಿಯಿಂದ ಸಾರ್ವಜನಿಕರಿಗೆ ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಫೆ.16 ರಂದು ಜೆಸಿಐ ನೆಲ್ಯಾಡಿ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಜೆಸಿಐ ನೆಲ್ಯಾಡಿಯ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್, ಪೂರ್ವಾಧ್ಯಕ್ಷರಾದ ದಯಾಕರ. ರೈ. ಕೆ.ಯಂ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಪೂರ್ವಾಧ್ಯಕ್ಷರಾದ ರವೀಂದ್ರ ಟಿ, ಜಯಾನಂದ ಬಂಟ್ರಿಯಾಲ್, ದಯಾನಂದ ಆದರ್ಶ, ಶಿವಪ್ರಸಾದ್, ಸತೀಶ್ ಭಟ್. ಕೆ. ಎಸ್ ದುರ್ಗಾಶ್ರೀ, ಪವರ್ ಮ್ಯಾನ್ ಗಳಾದ ರಮೇಶ ಅರಕೇರಿ, ವಿಠಲ್ ಭಜಂತ್ರಿ ಶೀಲಾವತಿ ಎಂ. ಕೆ., ಮೈಹಿಬೂಬು ಮೊದಲಾದವರು ಉಪಸ್ಥಿತರಿದ್ದರು.
ಜೆಸಿಐ ನೆಲ್ಯಾಡಿಯ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್ ಸ್ವಾಗತಿಸಿದರು, ರವೀಂದ್ರ.ಟಿ ನಿರೂಪಿಸಿದರು. ಶಿವಪ್ರಸಾದ್ ವಂದಿಸಿದರು.

Leave a Reply

error: Content is protected !!