ಕೊಕ್ಕಡ: ಆರಿಕೊಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಇದರ ಧರ್ಮದರ್ಶಿ ಹರೀಶ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಜೂ.24ರಂದು ಕಳೆoಜ ನಂದಗೋಕುಲ ಗೋಶಾಲೆಗೆ ಪತ್ನಿ ಸಮೇತ ಆಗಮಿಸಿ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹುಟ್ಟುಹಬ್ಬದ ಪ್ರಯುಕ್ತ ಗೋಶಾಲೆಯ ಗೊಗ್ರಾಸಕ್ಕಾಗಿ 25,000 /-ನಗದು ನೀಡಿ, ಕಾರ್ಯಕ್ರಮ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೋಶಾಲೆಯ ಪರವಾಗಿ ಅವರನ್ನು ಅಭಿನoದಿಸಲಾಯಿತು.
ನಂದಗೋಕುಲ ಗೋಶಾಲೆಯ ಅಧ್ಯಕ್ಷ ಡಾ.ದಯಾಕರ, ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿಗಳು ಮತ್ತು ನಂದಗೋಕುಲ ಗೋಶಾಲೆ ಸಿಬ್ಬಂದಿಗಳು ಉಪಸ್ಥಿತರಿದ್ದರು.