ಅರಸಿನಮಕ್ಕಿ: ಮೆಸ್ಕಾಂ ಇಲಾಖೆಯಿಂದ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು ಕಾರ್ಯ

ಶೇರ್ ಮಾಡಿ

ಕೊಕ್ಕಡ: ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು ಕಾರ್ಯವನ್ನು ಜು.10ರಂದು ಮೆಸ್ಕಾಂ ಇಲಾಖೆಯವರು ಕೈಗೊಂಡರು.

ಇತ್ತೀಚೆಗೆ ಶಿಬಾಜೆ ಗ್ರಾಮದ ಬರ್ಗುಳ ಎಂಬಲ್ಲಿ ವಿದ್ಯುತ್ ಕಂಬದ ಒಂದು ತಂತಿ ತುಂಡಾಗಿ, ಕಂಬಕ್ಕೆ ವಿದ್ಯುತ್ ಸ್ಪರ್ಶಿಸಿ ನಡೆದುಕೊಂಡು ಹೋಗುತ್ತಿದ್ದ ಪ್ರತೀಕ್ಷಾ ಶೆಟ್ಟಿಗೆ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಂತಹದೆ ಅಪಾಯಕಾರಿ ವಿದ್ಯುತ್ ಕಂಬಗಳಿದ್ದು. ಒಟ್ಟು 15 ಅಪಾಯಕಾರಿ ವಿದ್ಯುತ್ ಕಂಬಗಳನ್ನು ಪ್ರತಿಕ್ಷಾ ಶೆಟ್ಟಿ ಅವಘಡದ ಸಂಧರ್ಭದಲ್ಲಿ ಸಾರ್ವಜನಿಕರು ಗುರುತಿಸಿ ಮೆಸ್ಕಾಂ ಇಲಾಖೆಗೆ ತೆರವುಗೊಳಿಸುವಂತೆ ಮನವಿ ಮಾಡಿದ್ದು. ತಕ್ಷಣವೇ ತೆರವುಗೊಳಿಸುತ್ತೆವೆಂದು ಮೆಸ್ಕಾಂ ಇಲಾಖೆಯವರು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಅದರಂತೆ ಅಪಾಯಕಾರಿ ವಿದ್ಯುತ್ ಕಂಬ ತೆರೆವುಗೊಳಿಸಿದರು.

Leave a Reply

error: Content is protected !!