ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಜ್ಞಾನಮಯ ಪ್ರದೀಪ ಹಾಗೂ ಘೋಷ್ ವಾದನಗಳ ಸಮರ್ಪಣೆ

ಶೇರ್ ಮಾಡಿ

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಸದ್ವಿಚಾರ ಕಾರ್ಯಕ್ರಮ ಅಂಗವಾಗಿ “ಜ್ಞಾನಮಯ ಪ್ರದೀಪ” ಮತ್ತು ಘೋಷ್ ವಾದನಗಳ ಸಮರ್ಪಣೆಯ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಸುಬ್ರಾಯ ನಂದೋಡಿ ಅವರು ಭಗವದ್ಗೀತಾ ಸಂದೇಶವನ್ನು ನೀಡಿದರು. ನಂತರ ನಿವೃತ್ತ ಯೋಧ ಚಂದಪ್ಪ ಮೂಲ್ಯ ಅವರು ಘೋಷ್ ವಾದನಗಳನ್ನು ಕೊಡುಗೆಯಾಗಿ ನೀಡಿ ಅದರ ಸಮರ್ಪಣೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲಚಂದ್ರ ಕಾಂಚನ ವಹಿಸಿದರು. ವೇದಿಕೆಯಲ್ಲಿ ಜಯಂತ ಪೋರೋಳಿಯವರು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಸದಸ್ಯ ಸುಬ್ರಾಯ ಪುಣಚ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶುಭರಾಣಿ ಮಾತಾಜಿ ನಿರೂಪಿಸಿದರು. ಕಾವ್ಯ ಮಾತಾಜಿ ಸ್ವಾಗತಿಸಿದರು. ಗಣೇಶ್ ವಾಗ್ಲೆ ಶ್ರೀಮಾನ್ ವಂದಿಸಿದರು.

Leave a Reply

error: Content is protected !!