ಧರ್ಮಸ್ಥಳ: ಪಾದಯಾತ್ರಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತ

ಶೇರ್ ಮಾಡಿ

ನೇಸರ ಮಾ.01: ಪರಿಶುದ್ಧ ಮನಸ್ಸಿನಿಂದ, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿಕಲ್ಪವಿಲ್ಲದೆ ದೃಢಸಂಕಲ್ಪದಿಂದ ಮಾಡುವ ಭಕ್ತಿಗೆ ವಿಶೇಷ ಶಕ್ತಿಯಿದ್ದು ದೇವರ ಸಾಕ್ಷಾತ್ಕಾರವಾಗಿ ಭಕ್ತರು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಫೆ.28 ರಂದು ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶಿವರಾತ್ರಿ ಸಂದರ್ಭ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಗೌರವಿಸಿ ಮಾತನಾಡಿದರು.ನಿತ್ಯವೂ ನಿಗದಿತ ಸಮಯದಲ್ಲಿ ದೇವರ ಭಕ್ತಿ, ಧ್ಯಾನ, ಪ್ರಾರ್ಥನೆ ಮಾಡಿದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ಸುಲಲಿತವಾಗಿ ಪರಿಹಾರವಾಗುತ್ತವೆ. ದೇವರ ಸದಾ ಭಕ್ತರ ಜೊತೆಯಲ್ಲೇ ಇರುತ್ತಾರೆ. ದಾನ-ಧರ್ಮ, ಪರೋಪಕಾರ ಸೇವೆ ಮೊದಲಾದ ಸತ್ಕಾರ್ಯಗಳನ್ನು ಮಾಡುವಾಗ ಕಾಲಹರಣ ಮಾಡದೆ ತಕ್ಷಣ ಮಾಡಬೇಕು ಎಂದು ಸಲಹೆ ನೀಡಿದರು.ಪ್ರತಿವರ್ಷವೂ ದೃಢಸಂಕಲ್ಪದೊಂದಿಗೆ ಜಾತಿ, ಮತ, ಅಂತಸ್ತಿನ ಬೇಧ ಭಾವ ಮರೆತು ದೈಹಿಕ ಶ್ರಮದೊಂದಿಗೆ ಶಿವರಾತ್ರಿ ಸಂದರ್ಭ ಧರ್ಮಸ್ಥಳಕ್ಕೆ ಬರುವ ಪಾದಯಾತ್ರಿಗಳು ಶ್ರೀ ಮಂಜುನಾಥ ಸ್ವಾಮಿಯ ಪರಮ ಭಕ್ತರಾಗಿದ್ದು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ದೇವರ ದರ್ಶನ ಮತ್ತು ಸೇವೆಯಿಂದ ತಮ್ಮ ಎಲ್ಲಾ ಶ್ರಮ ಮತ್ತು ಆಯಾಸವನ್ನು ಮರೆತು ವಿಶೇಷ ಸಂತೋಷ ಮತ್ತು ತೃಪ್ತಿಯನ್ನು ಹೊಂದುತ್ತಾರೆ ಎಂದು ಹೇಳಿದರು.

ತಿಲೇ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೋಣಾಲು – ಪ್ರತಿಷ್ಠಾ ವಾರ್ಷಿಕೋತ್ಸವದ ಸಂಭ್ರಮದ ಕ್ಷಣ ವೀಕ್ಷಿಸಿ Subscribers ಮಾಡಿ

ಪಾದಯಾತ್ರೆಯ ಮಾರ್ಗದರ್ಶಕ ಹಾಗೂ ರೂವಾರಿಯಾದ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ, ಹಾಸನದ ಸಂದೇಶ ಗೌಡ, ರಂಗೇಗೌಡ, ಸಿದ್ಧಪ್ಪ ಗೌಡ, ಮೋಹನ ಗೌಡ, ಸುರೇಶ ಗೌಡ ಮೊದಲಾದವರನ್ನು ಹೆಗ್ಗಡೆಯವರು ಗೌರವಿಸಿದರು.ಪಾದಯಾತ್ರಿಗಳ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸ ಲಾಯಿತು ಹಾಗೂ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

—ಜಾಹೀರಾತು—

Leave a Reply

error: Content is protected !!