
ನೆಲ್ಯಾಡಿ: ಮರಾಟಿ ಸಮಾಜ ಸೇವಾ ಸಂಘ ನೆಲ್ಯಾಡಿ -ಕೌಕ್ರಾಡಿ ಇದರ ನೂತನ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಭಾನುವಾರ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ(ರಿ) ಇದರ ಸಭಾಭವನದಲ್ಲಿ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ (ರಿ) ಇದರ ಮಾರ್ಗದರ್ಶನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಬೆಟ್ಟು-ಪುತ್ತೂರು ಮರಾಟಿ ಸಮಾಜ ಸೇವಾ ಸಂಘ(ರಿ) ಇದರ ಅಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ ಎನ್.ದುಗ್ಗಪ್ಪ ನಾಯ್ಕ ಬಡಾವು ನೂತನ ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ಮಾಡಿ ಮರಾಟಿಗರು ಸಂಘಟಿತರಾದಾಗ ಮಾತ್ರ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಅನುಕೂಲ, ಮಕ್ಕಳನ್ನು ಹೆಚ್ಚು ಓದುವಂತೆ ಉತ್ತೇಜನ ನೀಡಿ ಉತ್ತಮ ವಿದ್ಯಾವಂತರನ್ನಾಗಿ ರೂಪಿಸಲು ಕರೆ ನೀಡಿದರು. ಮಕ್ಕಳು ಓದಿನ ಕಡೆಗೆ ಗಮನ ಹರಿಸಿ ಜ್ಞಾನ ಬೆಳೆಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೊಂಬೆಟ್ಟು, ಪುತ್ತೂರು ಮರಾಟಿ ಸಮಾಜ ಸೇವಾ ಸಂಘ(ರಿ) ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಲ್ಯಾಂಪ್ಸ್ ಸೊಸೖಟಿ ನಿರ್ದೇಶಕರಾದ ಕರುಣಾಕರ ಪಾಂಗ್ಲಾಯಿ ಮಾತನಾಡಿ ಸಂಘಗಳು ಪರಸ್ಪರ ಉತ್ತಮ ಸಂಪರ್ಕ, ಸಹಕಾರವನ್ನಿಟ್ಟುಕೊಂಡಲ್ಲಿ ಉತ್ತಮ ಪ್ರಗತಿಯನ್ನು ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ಜನರಿಗೆ ಗ್ರಾಮೀಣ ಸಂಘಗಳು ಹೆಚ್ಚು ಅನುಕೂಲಕರ ಎಂದರು.
ಪುತ್ತೂರು ಮರಾಟಿ ಸಂಘದ ಮಾಜಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಪಡೀಲು, ಕಾರ್ಯದರ್ಶಿ ಶೀನಪ್ಪ ನಾಯ್ಕ.ಎಸ್. ಹಾಗೂ ಕೋಶಾಧಿಕಾರಿ ಮೋಹನ ನಾಯ್ಕ.ಎಂ ಮತ್ತು ಊರ ಹಿರಿಯರಾದ ವಾಸಪ್ಪ ನಾಯ್ಕ ಸಂಪಿಗೆತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೖಸಿದರು.

ಉಪ್ಪಿನಂಗಡಿ ಶ್ರೀಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ(ರಿ) ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸೀತಾರಾಮ ನಾಯ್ಕ, ವಿಶ್ವನಾಥ ನಾಯ್ಕ ಉಡ್ಲದಕೋಡಿ, ಹಾಗೂ ಗೀತಾ ಆದರ್ಶನಗರ ಕಾರ್ಯಕ್ರಮಕ್ಕೆ ಶುಭ ಹಾರೖಸಿದರು.
ಹಿರಿಯರಾದ ವಾಸಪ್ಪ ನಾಯ್ಕ ಸಂಪಿಗೆತ್ತಡಿ, ಸುಂದರಿ ಚಾಮೆತ್ತಮೂಲೆ, ಸುಶೀಲ ಕುಮೇರು, ಸರಸ್ವತಿ ಹಳೆಹಿತ್ಲು, ಕಮಲ ಪುಚ್ಚೇರಿ ಹಾಗೂ ‘ಪುಟ್ಟ ಹೆಜ್ಜೆ ‘ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿದ ಕು.ಪ್ರಣಮ್ಯ ಚಾಮೆತ್ತಮೂಲೆ ಇವರನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪುತ್ತೂರು ಮಾತೃ ಸಂಘದ ಜ್ಞಾನ ನಿಧಿ ಗ್ರಂಥ ಭಂಡಾರಕ್ಕೆ ಪುಟ್ಟ ಹೆಜ್ಜೆ ಕವನ ಸಂಕಲನವೂ ಸೇರಿದಂತೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಶಶಿಕಲಾ ಚಾಮೆತ್ತಮೂಲೆ ಹಾಗೂ ತಂಡದವರು ಪ್ರಾರ್ಥಿಸಿದರು. ಶೀನಪ್ಪ ನಾಯ್ಕ.ಎಸ್ ಬರೆಗುಡ್ಡೆ ಸ್ವಾಗತಿಸಿದರು, ವಿದ್ಯಾಲತಾ ಚಾಮೆತ್ತಮೂಲೆ ನಿರೂಪಿಸಿದರು, ದಿನೇಶ್ ನಾಯ್ಕ ಪಡುಬೆಟ್ಟು ವಂದಿಸಿದರು.





