

ಕೊಕ್ಕಡ: ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾ.9ರಂದು ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ವೇಳೆ, ದೇವರ ಮುಂಭಾಗದಲ್ಲಿರುವ ಮೆಟ್ಟಿಲಿನಲ್ಲಿ ನಾಗರಹಾವು ಕಾಣಿಸಿಕೊಂಡಿತು. ಈ ದೃಶ್ಯ ನೋಡಿದ ಭಕ್ತಾದಿಗಳು ಆಶ್ಚರ್ಯಗೊಂಡರು.

ಬೇಸಿಗೆ ತಾಪ ಹೆಚ್ಚಿರುವುದರಿಂದ ನಾಗರಾಜನಿಗೆ ನೆರಳಿನ ಆಶ್ರಯದ ಅವಶ್ಯಕತೆ ಇರಬಹುದೆಂದು ಭಕ್ತರು ಅಭಿಪ್ರಾಯಪಟ್ಟರು. ಈ ದಿವ್ಯ ಸಂಗತಿಯನ್ನು ದೇವರ ಕೃಪೆಯ ಸಂಕೇತವೆಂದು ಭಕ್ತಾದಿಗಳು ಕೊಂಡಾಡಿದ್ದಾರೆ.






