ನೆಲ್ಯಾಡಿ: ಇಚಿಲಂಪಾಡಿ ಸೈಂಟ್ ಜೋರ್ಜ್ ಚರ್ಚ್‌ನಲ್ಲಿ ಮೇ 1ರಿಂದ 7ರವರೆಗೆ ಭವ್ಯ ವಾರ್ಷಿಕ ಹಬ್ಬ

ಶೇರ್ ಮಾಡಿ

ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬವು ಪ್ರತಿವರ್ಷದಂತೆ ಮೇ ತಿಂಗಳ 1ರಿಂದ 7ರವರೆಗಿನ ದಿನಗಳಲ್ಲಿ ಬ್ರಹ್ಮಾವರ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತೀವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ರಾನಿ ನೆಲೆಕ್ಕಲ್ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತೀವಂದನೀಯ ಡಾ.ಜೋಶ್ವಾ ಮಾರ್ ನಿಕೋದಿಮೋಸ್ ಮೆತ್ರಾಪ್ಪೋಲೀತ್ತಾ ಇವರ ಮಹನೀಯ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮ ಗುರುಗಳ ಸಹಕಾರದೊಂದಿಗೆ ಅತೀವಿಜೃಂಭಣೆಯಿಂದ ನಡೆಯಲಿದೆ.

ಮೇ.1ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 8ರಿಂದ ಪವಿತ್ರ ದಿವ್ಯ ಬಲಿ ಪೂಜೆ ಬ್ರಹ್ಮಾವರ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅತೀವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ ಸಂತಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, 9:30ರಿಂದ ಹಬ್ಬದ ಧ್ವಜಾರೋಹಣ, 12:30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, 6ಕ್ಕೆ ಸಂಧ್ಯಾ ಪ್ರಾರ್ಥನೆ.

ಮೇ.2ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ,7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ರೆಂಜಿಲಾಡಿ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್ ಧರ್ಮಗುರು ರೆ.ಫಾ.ಪೌಲ್ ಜೇಕಬ್ ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ. 12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಮೇ.3 ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ಪದವು ಸೈಂಟ್ ಜೋರ್ಜ್ ಓರ್ಥಡೋಕ್ಸ್ ಚರ್ಚ್ ಧರ್ಮಗುರು ರೆ.ಫಾ.ಸಕ್ಕರಿಯಾ ಮ್ಯಾಥ್ಯು ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ. 12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಮೇ.4ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ,7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ರೆ.ಫಾ। ವರ್ಗಿಸ್ ತೋಮಸ್ ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ,12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ,ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಮೇ.5ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ,7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ರೆ। ಫಾ। ಸೋಬಿನ್ ದಾನಿಯೇಲ್ (ಮಂಗಳೂರು ಅರಮನೆ) ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, 12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ,ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಮೇ.6ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ,7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ಮಣಿಪಾಲ್ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್ ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, 12ಕ್ಕೆ ಮಧ್ಯಾಹ್ನದ ಪ್ರಾರ್ಥನೆ. ಸಂಜೆ 6ಕ್ಕೆ ಸ್ವಾಗತ, 6.15ಕ್ಕೆ ಪಾದಯಾತ್ರಿಗರಿಗೆ ಸ್ವಾಗತ, 6.30ಕ್ಕೆ ಸಂಧ್ಯಾ ಪ್ರಾರ್ಥನೆ. 7.30ಕ್ಕೆ ಹಬ್ಬದ ಸಂದೇಶ, 8ಕ್ಕೆ ಮೆರವಣಿಗೆ ಕಾಯರ್ತಡ್ಕ ಶಿಲುಬೆಯವರೆಗೆ, 9.30ಕ್ಕೆ ಆಶೀರ್ವಾದ, ಅನ್ನ ಸಂತರ್ಪಣೆ.

ಮೇ.7ರಂದು ಬೆಳಗ್ಗೆ 7.30ಕ್ಕೆ ಪ್ರಭಾತ ಪ್ರಾರ್ಥನೆ,7.45ಕ್ಕೆ ಪವಿತ್ರ ದಿವ್ಯ ಬಲಿ ಪೂಜೆ ರಾನಿ ನೆಲೆಕ್ಕಲ್ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತೀವಂದನೀಯ ಡಾ.ಜೋಶ್ವಾ ಮಾರ್ ನಿಕೋದಿಮೋಸ್ ಮೆತ್ರಾಪ್ಪೋಲೀತ್ತಾ ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, 11ಕ್ಕೆ ಅನ್ನ ಸಂತರ್ಪಣೆ. ಮಧ್ಯಾಹ್ನ12ಕ್ಕೆ ಏಲಂ, 1.45ಕ್ಕೆ ಮೆರವಣಿಗೆ(ಹೊಸಂಗಡಿ ಶಿಲುಬೆ ಗೋಪುರದವರೆಗೆ),3ಕ್ಕೆ ಆಶೀರ್ವಾದ, 3.15ಕ್ಕೆ ಪ್ರಸಾದ ವಿತರಣೆ, 5ಕ್ಕೆ ಹಬ್ಬದ ಧ್ವಜ ಇಳಿಸುವಿಕೆ. ಎಂದು ಚರ್ಚ್ ನ ವಿಕಾರ್ ರೆ. ಫಾ. ವರ್ಗೀಸ್ ತೋಮಸ್, ಕಾರ್ಯದರ್ಶಿ ಜೋನ್ಸನ್ ಟಿ.ಕೆ, ಟ್ರಸ್ಟಿ ವಿ.ಎನ್.ಚಾಕೋ ಪ್ರಕಟಣೆ ಮೂಲಕ ತಿಳಿಸಿದರು

  •  

Leave a Reply

error: Content is protected !!