

ನೆಲ್ಯಾಡಿ ಇಲ್ಲಿನ ಆರ್ಲ ಸೆಂಟ್ ಮೇರಿಸ್ ಚರ್ಚ್ನ ಆಡಳಿತ ಟ್ರಸ್ಟಿಗಳಾಗಿ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಟ್ರಸ್ಟಿಗಳಾದ ಸಂತೋಷ್ ಪುದಮನ, ಬಾಬು ಮುಳವೇಲಿ ಪರಂಭಿಲ್, ವಿನೋದ್ ಪುಳಿಕಾಯತ್, ಬಿಜು ಮೂಗನಾನಿ ಅವರನ್ನು ಚರ್ಚ್ ವತಿಯಿಂದ ಕಳೆದ ಭಾನುವಾರ ನಡೆದ ಸಭೆಯಲ್ಲಿ ಸನ್ಮಾನಿಸಲಾಯಿತು.
ಧರ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಇವರ ತ್ಯಾಗಮಯ ಸೇವೆಯನ್ನು ಪ್ರಶಂಸಿಸಿದ ಧರ್ಮಗುರುಗಳಾದ ವಂ.ಶಾಜಿ ಮಾತ್ಯು ಅವರು ಸನ್ಮಾನಿಸಿದರು. ಟ್ರಸ್ಟಿಗಳ ಸೇವಾ ಅವಧಿಯಲ್ಲಿ ಚರ್ಚ್ ಅಭಿವೃದ್ಧಿಯ ನಾನಾ ಹಂತಗಳಲ್ಲಿ ಅವರು ಸಲ್ಲಿಸಿದ ಶ್ರಮಕ್ಕೆ ಸಭೆಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದರು.













