



ನೆಲ್ಯಾಡಿ: ಲೇಖಕಿ ಹಾಗೂ ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯಾಗಿರುವ ಶ್ರೀಮತಿ ನ್ಯಾನ್ಸಿ ನೆಲ್ಯಾಡಿಯವರು, ಆರ್.ಪಿ. ಕಲಾ ಟ್ರಸ್ಟ್(ರಿ), ಪಾಂಬಾರು – ಪುತ್ತೂರು ತಾಲೂಕು, ದ.ಕ ಜಿಲ್ಲೆ ಇವರಿಂದ ಆಯೋಜಿಸಲಾದ ಅಂತರ್ ರಾಜ್ಯ ಆನ್ಲೈನ್ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ “ಅಂತರ್ ರಾಜ್ಯ ಸಾಹಿತ್ಯ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯನ್ನು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.







