


ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಜೂನ್ 28ರಂದು ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಅವರು, “ಸಂಘವು ಕಳೆದ ವರ್ಷ ₹34.06 ಕೋಟಿ ರೂ. ವ್ಯವಹಾರ ನಡೆಸಿದ್ದು, ₹50.83 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತಿ ಕೆ.ಜಿ. ರಬ್ಬರ್ ಶೀಟ್ಗೆ ₹2 ಬೋನಸ್ ನೀಡಲು ನಿರ್ಧಾರಿಸಲಾಗಿದೆ,” ಎಂದು ಹೇಳಿದರು.
ಅಂಗವಿಕಲರಿಗೆ ಸಹಾಯ:
ಮಹಾಸಭೆಯ ವೇಳೆ ಕೊರಗಪ್ಪ ಕೆಮ್ಮತ್ತಮನೆ ಕೊಳ್ತಿಗೆ, ಅಬ್ದುಲ್ಲ ಗಾಳಿಮುಖ, ಐಸಾಬಿ ಕುದ್ಕುಳಿ, ಅಬ್ದುಲ್ ಕುಞ, ಆಶಾಭವನ್ ವೃದ್ಧಾಶ್ರಮ ಇಚ್ಲಂಪಾಡಿ, ಜಿಬಿನ್ ಕುಟ್ರುಪ್ಪಾಡಿ, ಶ್ರೀಧರ ಬಿ.ನಾಗನಡ್ಕ ಇವರಿಗೆ ವೀಲ್ಚೇರ್ ವಿತರಿಸಲಾಯಿತು. ಪೂವರ ಕರ್ನೂರು, ಉಮ್ಮಾಲಿಯಮ್ಮ ಬಾಂಟಡ್ಕ, ಐಸಮ್ಮ ಬಾಂಟಡ್ಕ ಇವರಿಗೆ ವಾಕಿಂಗ್ ಸ್ಟಿಕ್ ನೀಡಲಾಯಿತು.
ಅಧಿಕ ರಬ್ಬರ್ ಹಾಕಿದ ಸದಸ್ಯರಿಗೆ ಗೌರವ:
ನೆಲ್ಯಾಡಿ ಕೇಂದ್ರ ಕಚೇರಿಯಿಂದ ಪ್ರವೀಣ್ ಕುಮಾರ್ ಜಿ. ಗಾಣದಮೂಲೆ, ಗೋಪಾಲಕೃಷ್ಣ ಪಿ., ಮ್ಯಾಥ್ಯು ಎ.ಸಿ., ಕಡಬ ಶಾಖೆಯಿಂದ ರಾಯ್ ಅಬ್ರಹಾಂ, ತೋಮಸ್ ಜಕಾರಿಯಾ, ಪೂವಪ್ಪ ಕೆ., ಪುತ್ತೂರು ಶಾಖೆಯಿಂದ ಗಿರೀಶ್ ಕೃಷ್ಣ, ಡಾ. ಪ್ರವೀಣ್ ಪಾರೆ, ಸುರೇಶ್ ಕುಮಾರ್ ಸೊರಕೆ, ಈಶ್ವರಮಂಗಲ ಶಾಖೆಯಿಂದ ನವೀನ್ ಕುಮಾರ್ ಕೆ. ನೆಟ್ಟಣಿಗೆ, ವಿಕ್ರಮ್ ರೈ, ಕೂಳೂರು ಸುಬ್ರಹ್ಮಣ್ಯ ಭಟ್, ಕೆಯ್ಯೂರು ಶಾಖೆಯಿಂದ ರಶ್ಮಿ ಎಮ್. ರೈ, ಬೇಬಿ ಜೋಸೆಫ್, ಪ್ರಸನ್ನಕುಮಾರ್ ಎ.ಕೆ., ಇಚ್ಲಂಪಾಡಿ ಖರೀದಿ ಕೇಂದ್ರದಿಂದ ಜೋನ್ ಪಿ.ಜೆ., ಸತ್ಯಾನಂದ ಬಿ., ನಿತ್ಯಾನಂದ ಬಿ., ನೆಲ್ಯಾಡಿ ಉಪಖರೀದಿ ಕೇಂದ್ರದಿಂದ ಸುಬ್ರಹ್ಮಣ್ಯ ಶಬರಾಯ, ಮ್ಯಾಥ್ಯು ವಿ.ಎಮ್., ಸಾಬು ಎ.ಎಮ್. ಇವರು ಗೌರವಿಸಲಾದವರು.
ಹಿರಿಯರ ಗೌರವ:
ಹಿರಿಯ ರಬ್ಬರ್ ಬೆಳೆಗಾರರಾದ ಅನ್ನಮ್ಮ ಪಿ.ಎಮ್. ಮಣ್ಣಗುಂಡಿ, ಶೇಷಪ್ಪ ಗೌಡ ಕೆ. ಕೋಡಿಂಬಾಳ, ಶ್ರೀನಿವಾಸ ಶೆಟ್ಟಿ ಕಟ್ಟಾರ ಬೆಳ್ಳಿಪ್ಪಾಡಿ, ಶಿವರಾಮಕೃಷ್ಣ ಭಟ್ ಶ್ರೀಶೈಲ ಪಟ್ಟಾಜೆ ಮುಂಡೂರು, ರಾಮಣ್ಣ ಗೌಡ ಕೆಯ್ಯೂರು, ಮುತ್ತಣ್ಣ ಗೌಡ ಒಡ್ಯತಡ್ಕ, ಅಪ್ಪಿ ಕೊಣಾಲು ಇವರನ್ನು ಸ್ಮರಣಿಕೆ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
ಸದಸ್ಯರಿಂದ ಪ್ರಮುಖ ಬೇಡಿಕೆಗಳು:
ಡೆನ್ನಿಸ್ ಪಿಂಟೋ ಕಾಂಚನ ಅವರು ಬೆಳೆಗಾರರ ಕಲ್ಯಾಣ ನಿಧಿ ಸ್ಥಾಪನೆಗಾಗಿ ಒತ್ತಾಯಿಸಿದರು. ವಿಕ್ರಮ್ ರೈ ಅವರು ಈಶ್ವರಮಂಗಲ ಶಾಖೆಯಲ್ಲಿ ರಸಗೊಬ್ಬರ ಮಾರಾಟ ಆರಂಭಿಸಬೇಕು ಎಂದು ಕೇಳಿದರು. ಸೂಪಿ ಬಿ.ಹೆಚ್. ಅವರು ಟ್ಯಾಪಿಂಗ್ ತರಬೇತಿ ಶಿಬಿರ ಆಯೋಜಿಸಲು ಸೂಚನೆ ನೀಡಿದರು. ಜಾನ್ ಪಿ.ಎಸ್. ಅವರು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಗೌರವ ನೀಡುವ ಬಗ್ಗೆ ಪ್ರಸ್ತಾಪಿಸಿದರು. ವಿಜಯಕುಮಾರ್ ರೈ ಕೆಯ್ಯೂರು ಅವರು ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಬೇಕೆಂದು ಒತ್ತಾಯಿಸಿದರು. ಪ್ರಸನ್ನಕುಮಾರ್ ಕೆಯ್ಯೂರು ಅವರು ಸ್ಕ್ರಾಪ್ ದರದಲ್ಲಿ ತಾರತಮ್ಯವಿದೆ ಎಂದರೆ, ಬಾಳಪ್ಪ ಗೌಡ ಅವರು ಹಿರಿಯ ನಾಗರಿಕರಿಗೆ ಹೆಚ್ಚಿದ ಠೇವಣಿ ಬಡ್ಡಿ ನೀಡಬೇಕೆಂದು ಕೇಳಿದರು.
ತೆರಿಗೆ ಪಾವತಿಯಲ್ಲೂ ಉತ್ಕೃಷ್ಟತೆ:
2024-25ನೇ ಸಾಲಿನಲ್ಲಿ ಸಂಘವು ₹1,36,42,879 ರೂ. ತೆರಿಗೆ ಪಾವತಿಸಿದ್ದು, ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ ಸಹಕಾರಿ ಸಂಘವಾಗಿ ನಂ.1 ಸ್ಥಾನ ಗಳಿಸಿದೆ. ಈ ಸಾಧನೆಗೆ ಕೇಂದ್ರ ತೆರಿಗೆ ಇಲಾಖೆಯ ಮೆಚ್ಚುಗೆ ಪ್ರಮಾಣಪತ್ರವೂ ದೊರೆತಿದೆ.
ಅತ್ಯುತ್ತಮ ಶಾಖೆ ಸಿಬ್ಬಂದಿಗೆ ಗೌರವ:
ಈಶ್ವರಮಂಗಲ ಶಾಖೆಯ ಸಿಬ್ಬಂದಿಗೆ ಉತ್ತಮ ಸೇವೆಗಾಗಿ ಗೌರವಿಸಲಾಯಿತು. ಘಟಿಕೆಯಲ್ಲಿ ಕಡಬ ತಾ.ಪಂ.ಕೆಡಿಪಿ ಸದಸ್ಯರಾಗಿ ಆಯ್ಕೆಯಾದ ಗಿರೀಶ್ ಸಾಲಿಯಾನ್ ಬಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತಿಯಿದ್ದವರು:
ಸಂಘದ ಉಪಾಧ್ಯಕ್ಷ ರೋಯ್ ಅಬ್ರಹಾಂ, ನಿರ್ದೇಶಕರು ಸಿ. ಜೋರ್ಜ್ ಕುಟ್ಟಿ, ಎನ್.ವಿ. ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್ ಎನ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಕಾರ್ಯನಿರ್ವಾಹಣಾಧಿಕಾರಿ ಶಶಿಪ್ರಭಾ ಕೆ., ಸಿಬ್ಬಂದಿ ರುಕ್ಮಯ, ಮತ್ತು ಇತರರು ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ರುಕ್ಮಯ ನಿರೂಪಿಸಿದರು. ಉಪಾಧ್ಯಕ್ಷ ರೋಯ್ ಅಬ್ರಹಾಂ ವಂದಿಸಿದರು. ಕಾರ್ಯನಿರ್ವಾಹಣಾಧಿಕಾರಿ ಶಶಿಪ್ರಭಾ ಕೆ. ಮಹಾಸಭೆಯ ನೋಟಿಸ್ ಓದಿ ದೃಢೀಕರಿಸಿದರು.









