ಕನ್ನಡ ಚಿತ್ರರಂಗ ಕಂಡ ಮಾನವೀಯ ಗುಣಗಳ ಸಾಕಾರ ಮೂರ್ತಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಅಪ್ಪು ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಮಾ.10:ಕನ್ನಡ ಚಿತ್ರರಂಗ ಕಂಡ ಮಾನವೀಯ ಗುಣಗಳ ಸಾಕಾರ ಮೂರ್ತಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಅಪ್ಪು ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮಗಳು ಇದೇ ಬರುವ ದಿನಾಂಕ 13-03-2022 ನೇ ಭಾನುವಾರ ನಡೆಯಲಿವೆ. ಬೆಳಗ್ಗೆ 9.30 ರಿಂದ ಸ.ಹಿ.ಪ್ರಾ ಶಾಲೆ ನೇರ್ಲ ಇಚ್ಲಂಪಾಡಿಯಲ್ಲಿ “ಬ್ಲಡ್ ಡೋನರ್ಸ್ ಮಂಗಳೂರು” ಇವರ ಸಹಯೋಗದಲ್ಲಿ , ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇಚ್ಲಂಪಾಡಿ ಇವರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿರುವುದು. ರಾತ್ರಿ ಗಂಟೆ 8 ರಿಂದ 11 ರ ತನಕ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಬಳಿ ಸಪ್ತಸ್ವರಂ ಮ್ಯೂಸಿಕ್ಸ್ ಇಚ್ಲಂಪಾಡಿ ಇವರಿಂದ ಹಾಗೂ ಕರಾವಳಿ ಕರ್ನಾಟಕದ ಖ್ಯಾತ ಗಾಯಕರಿಂದ “ಪುನೀತ್ ನಮನ” ರಸಮಂಜರಿ ಹಾಗೂ “ನೃತ್ಯ ವೈಭವ” ನಡೆಯಲಿರುವುದು.ಈ ಎಲ್ಲಾ ಕಾರ್ಯಕ್ರಮ ಗಳಿಗೆ ಅಪ್ಪು ಅಭಿಮಾನಿ ಬಳಗ ಇಚ್ಲಂಪಾಡಿ ಇವರಿಂದ ತುಂಬು ಹೃದಯದ ಸ್ವಾಗತ.

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🙏

👇👇👇👇👇👇👇

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ದೇವಿ ಮಹಾತ್ಮೆ | 09-03-2022

ಜಾಹೀರಾತು

Leave a Reply

error: Content is protected !!