

ರಾಮಕುಂಜ: ಜಗತ್ತಿಗೆ ಸಂಸ್ಕøತಿಯ ಪಾಠ ಮಾಡಿರುವ, ಜ್ಞಾನ ನೀಡಿದ ವಿಶ್ವದ ಏಕೈಕ ಶ್ರೇಷ್ಠ ರಾಷ್ಟ್ರ ಭಾರತದಲ್ಲಿ ಒಗ್ಗಟ್ಟು, ಸಂವಿಧಾನ ಉಳಿಯಬೇಕೆಂಬ ಉದ್ದೇಶದಿಂದ ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಿದ್ದು ಅದು ಈಗ ನೂರು ವರ್ಷ ತುಂಬವ ವೇಳಗೆ ಹೆಮ್ಮರವಾಗಿ ಬೆಳೆದು ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ.ರವಿ ಮಂಡ್ಯ ಹೇಳಿದರು.
ರಾಮಕುಂಜದಲ್ಲಿ ಗುರುವಾರ ದಂದು ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸೇವಕ ಸಂಘದ ಸಂಘ ಶತಾಬ್ದಿ ಹಾಗೂ ವಿಜಯದಶಮಿ ಕಾರ್ಯಕ್ರಮದಲ್ಲಿ ಭೌಧ್ಧಿಕ್ ನೀಡಿದರು.
ಈ ದೇಶವನ್ನು ಬಂಧಮುಕ್ತವಾಗಿಸಬೇಕೆಂದು ನಮ್ಮ ಹಿರಿಯರು ತ್ಯಾಗ ಬಲಿದಾನ ಮಾಡಿದರು, 1857ರ ಸಿಪಾಯಿ ದಂಗೆಯನ್ನು ಪ್ರಥಮ ಸ್ವಾಂತಂತ್ರ್ಯ ಸಂಗ್ರಾಮ ಎಂದು ಕರೆಯುತ್ತಾರೆ, ಆದರೆ ಮೊಗಲರು ಈ ದೇಶಕ್ಕೆ ಅಕ್ರಮಣ ಮಾಡಿದಾಗಲೇ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿದೆ, 500 ವರ್ಷಗಳ ಹಿಂದೆಯೆ ತುಳುನಾಡಿನ ಪುಣ್ಯದ ಮಣ್ಣಿನ ಉಳ್ಳಾಲದ ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಪ್ರಥಮ ಹೋರಾಟ ಪ್ರಾರಂಭಿಸಿದ್ದಾರೆ. ಅಷ್ಟೊಂದು ದೀರ್ಘ ಕಾಲದ ಹೋರಾಟ ನಡೆದರೂ ನಮ್ಮಲ್ಲಿನ ಒಳಜಗಳ, ಭಾಷೆ, ಜಾತಿ,ಪ್ರಾಂತ್ಯ ಹೆಸರಲ್ಲಿ ನಮ್ಮಲ್ಲಿ ಭಿನ್ನಭಿಪ್ರಾಯದಿಂದ ಸ್ವತಂತ್ರ ದೇಶವಾಗಲು ವಿಳಂಬವಾಯಿತು. ಸ್ವಾತಂತ್ರ್ಯ ಸಿಕ್ಕಿದರೂ ಅದನ್ನು ಉಳಿಸಿಕೊಳ್ಳುವ ಐಕ್ಯಮತ ನಮ್ಮಲ್ಲಿ ಮೂಡಲು ಸಾಧ್ಯವಿಲ್ಲ ಎಂದು ಮನಗಂಡು ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಆರ್ಎಸ್ಎಸ್ ಪ್ರಾರಂಭಿಸಿದರು.
ಹಿಂದು ಹಿಂದತ್ವ ಅಂದ್ರೆ ನೆಲದ ಮಣ್ಣಿನ ಅಸ್ಮಿತೆ, ಹಿಂದು ಜಾತಿ ಅಲ್ಲ, ಅದು ಧರ್ಮ, ಜೀವನ ಪದ್ದತಿ, ಈ ದೇಶದ ಸಂಸ್ಕøತಿ, ಸಂಸ್ಕಾರ, ಜಿವನ ಮೌಲ್ಯಗಳು ಹಿಂದುತ್ವದಲ್ಲಿ ಒಳಗೊಂಡಿರುತ್ತದೆ, ಈ ದೇಶದಲ್ಲಿರುವವರೆಲ್ಲರೂ, ಯಾರು ದೇಶವನ್ನು ಮಾತೃಭೂಮಿ ಎಂದು ನಂಬುತ್ತಾರೋ, ಅದಕ್ಕೆ ರಾಷ್ಟ್ರ ಭಕ್ತಿಯನ್ನು ತೋರುತ್ತಾರೋ, ಇಲ್ಲಿನ ಮಹಾಪುರುಷರರನ್ನು ಗೌರವಿಸುತ್ತಾರೋ ಅವರೆಲ್ಲಾ ಹಿಂದೂಗಳೆ ಆಗಿದ್ದಾರೆ. ಕೆಲವರು ಆರ್ ಎಸ್ ಎಸ್ ನವರು ಸ್ವಾಂತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುತ್ತಾರೆ. ಸಂಘದ ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯಾ ಪೂರ್ವದ ಕಾಂಗ್ರೇಸ್ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ, ದೇಶ ಒಗ್ಗಟ್ಟಾಗಿ ಉಳಿಯಬೇಕು ಎನ್ನವ ದೃಷ್ಠಿಯಿಂದ ಕಾಂಗ್ರೇಸ್ ಬಂದ ಹೊರ ಬಂದು ಸಂಘವನ್ನು ಪ್ರಾರಂಭಿಸಿದದಾರೆ. ಆರ್ ಎಸ್ ಎಸ್ ನ್ನು ನಾನಾ ಕಾರಣಗಳಿಗಾಗಿ ದೇಶದಲ್ಲಿ ಬ್ಯಾನ್ ಮಾಡಿದರೂ ಸಂಘ ಪುವಿಟ್ಟ ಚಿನ್ನದಂತೆ ಬೆಳಗುತ್ತ್ರಾ ತನ್ನ ಸೇವಾ ಕಾರ್ಯದೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಇಲ್ಲಿ ಆಳವಾಗಿ ಬೇರು ಬಿಟ್ಟಿದೆ, ದೇಶದಲ್ಲಿ 60ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಚಾರಕ್ಕೆ ಬಯಸದೆ ಸೆವಾ ಕಾರ್ಯ ಮಾಡುತ್ತಿದ್ದಾರೆ ಎಂದು ರವಿ ಮಂಡ್ಯ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಭವಾನಿಶಂಕರ ಪರಂಗಾಜೆ ಮಾತನಾಡಿ ನಾನು ಆರ್ ಎಸ್ ಎಸ್ ನಲ್ಲಿ ಭಾಗವಹಿಸದಿದ್ದರೂ ಸಂಘದ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲೇ, ಹಾಗಾಗಿ ಸಂಘಕ್ಕೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೇನೆ, ಸಂಘದ ನಿಸ್ವಾರ್ಥ ಸೇವೆ, ದೇಶ ಕಟ್ಟುವ ಕೈಕಂರ್ಯ, ದೇಶ ಪ್ರೇಮ, ದೇಶ ರಕ್ಷಣೆಗೆ ಕಟಿಬದ್ದವಾಗಿರುವುದು ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದರು.
ಕಡಬ ತಾಲೂಕು ಸಂಘ ಚಾಲಕ ದಿವಾಕರ್ ರಾವ್ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧೀಶ್ ಹಳೆನೇರೆಂಕಿ ಸ್ವಾಗತಿಸಿದರು. ಹರಿಪ್ರಸಾದ್ ರಾಮಕುಂಜ ವಂದಿಸಿದರು.






