


ನೆಲ್ಯಾಡಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೆಸಿಐ ಇಂಡಿಯಾ ಇದರ ವಲಯ 15ರ ವಲಯಾಡಳಿತ ಮಂಡಳಿಗೆ ಜೆಸಿಐ ನೆಲ್ಯಾಡಿ ಘಟಕದ 2025ರ ಅಧ್ಯಕ್ಷ ಜೆಸಿ ಡಾ.ಸುಧಾಕರ್ ಶೆಟ್ಟಿ ಅವರು ಸಿಎಸ್ಆರ್ ವಿಭಾಗದ ವಲಯ ಸಂಯೋಜಕರಾಗಿ ನೇಮಕಗೊಂಡಿದ್ದಾರೆ.
ವಿಠ್ಠಲದ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ನಡೆದ ಜೆಸಿಐ ಇಂಡಿಯಾ ವಲಯ 15ರ ನೂತನ ವಲಯಾಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಈ ನೇಮಕಾತಿ ನಡೆಯಿತು. ಸಮಾರಂಭದಲ್ಲಿ ನೂತನ ವಲಯಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ ಅವರು ಜೆಸಿ ಡಾ.ಸುಧಾಕರ್ ಶೆಟ್ಟಿ ಅವರಿಗೆ ಅಧಿಕೃತ ನೇಮಕಾತಿ ಪತ್ರವನ್ನು ವಿತರಿಸಿ ಪ್ರಮಾಣವಚನ ಬೋಧಿಸಿದರು.






