ಗರ್ಡಾಡಿ ನಂದಿಬೆಟ್ಟ ಬಳಿ ಅಪಘಾತಕ್ಕೆ ಹಿರೆಬಂಡಾಡಿಯ ಸಹೋದರರು ಬಲಿ

ಶೇರ್ ಮಾಡಿ

ನೇಸರ ಮಾ.18: ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ದ್ವಿಚಕ್ರ ವಾಹನ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗೆ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಹೋದರರು ಮೃತಪಟ್ಟ ಘಟನೆ ಮಾ.18 ರಂದು ಸಂಜೆ ಸಂಭವಿಸಿದೆ.

ಹೀರೆಬಂಡಾಡಿ ಗ್ರಾಮದ ನಿವೃತ್ತ ಶಿಕ್ಷಕ ಅಬ್ದುಲ್‌ರಜಾಕ್ ಅವರ ಪುತ್ರರಾದ ಸಿರಾಜ್ ಮತ್ತು ಸಾಧಿಕ್ ಈ ದುರ್ಘಟನೆಯಲ್ಲಿ ಮೃತಪಟ್ಟವರು. ಇವರಿಬ್ಬರು ಹೊಸಂಗಡಿ ಸಮೀಪದ ತಮ್ಮ ಸಂಬಂಧಿಕರ ಮನೆಗೆ ಶವ ಸಂಸ್ಕಾರಕ್ಕೆ ಬಂದು ಮರಳಿ ಉಪ್ಪಿನಂಗಡಿಯ ಹೀರೆಬಂಡಾಡಿಗೆ ಹೋಗುತ್ತಿರುವ ಸಮಯ ಬಸ್ ಹಾಗೂ ದ್ವಿಚಕ್ರ ನಡುವೆ ಅಪಘಾತ ಸಂಭವಿಸಿದೆ.
ಮಹಮ್ಮದ್ ಸಾಧಿಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಿರಾಜ್ ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಸ್ತರಾಗಿದ್ದು ಕಳೆದ ಐದು ತಿಂಗಳಿಂದ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!