ಪುಚ್ಚೇರಿ: ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ಎಸ್ ಸಿ ಹಾಗೂ ಎಸ್ ಟಿ ಅನುದಾನದಡಿ ಶೇಕಡ 25 ಪಂಚಾಯತಿ ನಿಧಿಯಿಂದ ಪುಚ್ಚೇರಿ ಶಾಲಾ ಮೈದಾನದಲ್ಲಿ ಸುಮಾರು 37 ಮನೆಗಳಿಗೆ ಟೇಬಲ್ ಹಾಗೂ ನಾಲ್ಕು ಚೇರ್ ಗಳನ್ನು ಪಂಚಾಯತಿ ಸದಸ್ಯ ಆನಂದ ಪಿಲವೂರು ಹಾಗೂ ಜಯಂತಿ ಜಾರಂಗೇಲು ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಸಂದರ್ಭದಲ್ಲಿ ಬಿಜೆಪಿ ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಪ್ರಸಾದ್ ಶೆಟ್ಟಿ ರಾಮನಗರ, ಸುಳ್ಯ ಮಂಡಲ ಸದಸ್ಯ ಸುಂದರ ಗೌಡ ಅತ್ರಿಜಾಲು, ಬೂತ್ ಅಧ್ಯಕ್ಷ ದೀಕ್ಷಿತ್ ದಖಾ೯ಸು, ಗಂಗಾಧರ ಗೌಡ ಪುಚ್ಚೇರಿ, ಸಬಾಸ್ಟಿನ್ ಪಿ.ಜೆ, ಲಕ್ಷ್ಮಣ ಇಚೂರು, ಗೊಜ ಮೊಗೇರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು

Leave a Reply

error: Content is protected !!