ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ

ಶೇರ್ ಮಾಡಿ

ನೇಸರ ಮಾ.20: ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟವು ಗಾಂಧಿ ಮೈದಾನ ನೆಲ್ಯಾಡಿಯಲ್ಲಿ ಮಾ 21ನೇ ಸೋಮವಾರ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಬೆಳಗ್ಗೆ ಗಂಟೆ 9.30ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಭಾಸ್ಕರ ಎಸ್ ಗೌಡ, ಅಧ್ಯಕ್ಷರು ಪಿ ಎಲ್ ಡಿ ಬ್ಯಾಂಕ್ ಪುತ್ತೂರು, ಗೌರವ ಅತಿಥಿಯಾಗಿ ಯು ಪಿ ವರ್ಗಿಸ್, ಎಲೈಟ್ ರಬ್ಬರ್ ನೆಲ್ಯಾಡಿ, ಅಧ್ಯಕ್ಷತೆಯನ್ನು ಪ್ರೋ.ಪಿ.ಎಸ್ ಎಡಪಡಿತ್ತಾಯ, ಉಪ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ ನೆರವೇರಿಸಲಿರುವರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಚೇತನ, ಅಧ್ಯಕ್ಷರು ಗ್ರಾಮ ಪಂಚಾಯತ್ ನೆಲ್ಯಾಡಿ, ಗೌರವ ಅತಿಥಿಯಾಗಿ ರಫೀಕ್ ಸೀಗಲ್, ಅಧ್ಯಕ್ಷರು ವರ್ತಕರ ಸಂಘ ನೆಲ್ಯಾಡಿ, ವಿಮಲ್ ಕುಮಾರ್, ಅಧ್ಯಕ್ಷರು ಕರ್ನಾಟಕ ಸರಕಾರಿ ನೌಕರರ ಸಂಘ ಕಡಬ, ಅಧ್ಯಕ್ಷತೆಯನ್ನು ಕಿಶೋರ್ ಕುಮಾರ್ ಸಿ.ಕೆ, ರಿಜಿಸ್ಟರ್ ಮಂಗಳೂರು ವಿಶ್ವವಿದ್ಯಾನಿಲಯ ಭಾಗವಹಿಸಲಿರುವರು ಎಂಬುದಾಗಿ ಶ್ರೀಮತಿ ಉಷಾ ಅಂಚನ್, ನಿರ್ದೇಶಕರು ಪಿ.ಎ.ಸಿ.ಎಸ್.ನೆಲ್ಯಾಡಿ, ಡಾ.ಜಯರಾಜನ್ ಎನ್, ಸಹ ಸಂಯೋಜಕರು, ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ, ಆನಂದ ಕೆ, ಶಾರೀರಿಕ ನಿರ್ದೇಶಕರು, ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ತಿಳಿಸಿದರು
.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!