










ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಶ್ರೀ ಕ್ಷೇತ್ರ ದೈವಂಗಳ ಬನ ದೈವಸ್ಥಾನದ ನೂತನ ನೋಂದಾಯಿತ ಆಡಳಿತ ಸಮಿತಿಯನ್ನು ರಚಿಸಲಾಯಿತು.
ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ತುತ್ರಪ್ಪ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಅಚ್ಚುತ ಗೌಡ, ಕಾರ್ಯದರ್ಶಿಯಾಗಿ ಕೆ. ರಾಜೇಶ್ ರೈ ಹಾಗೂ ಕೋಶಾಧಿಕಾರಿಯಾಗಿ ಹೇಮಂತ್ ರೈ ಅವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ತ್ಯಾಂಪಣ್ಣ ಶೆಟ್ಟಿ, ಕೊರಗಪ್ಪ ಶೆಟ್ಟಿ, ಎಂ. ಉಮೇಶ್, ನಳಿನಿ, ಮೋನಪ್ಪ ಗೌಡ, ಜಾರಪ್ಪ ಗೌಡ, ನಾರಾಯಣ ಎಂ.ಕೆ. ಹಾಗೂ ಶೀನಪ್ಪ ಡಿ. ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಊರಿನ ಗಣ್ಯರು, ಭಕ್ತಾದಿಗಳು ಹಾಗೂ ದೈವಸ್ಥಾನದ ಹಿತೈಷಿಗಳು ಉಪಸ್ಥಿತರಿದ್ದು, ನೂತನ ಆಡಳಿತ ಸಮಿತಿಗೆ ಶುಭ ಹಾರೈಸಿದರು.



