










ಸುಬ್ರಮಣ್ಯ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರಯೋಧರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಗೆ ನಮನಗಳನ್ನು ಸಲ್ಲಿಸುತ್ತಾ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು.
ಸುಬ್ರಹ್ಮಣ್ಯದಲ್ಲಿ ವಾಸವಾಗಿರುವ ನಿವೃತ್ತ ಸೇನಾಧಿಕಾರಿ ಸುಬ್ರಹ್ಮಣ್ಯ ಗೌಡ ಅತ್ಯಾಡಿ ಅವರನ್ನು ಇನ್ನರ್ ವೀಲ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಸೌಮ್ಯ ದಿನೇಶ್ ಎಣ್ಣೆಮಜಲ್, ನಿಕಟ ಪೂರ್ವ ಅಧ್ಯಕ್ಷ ವಿಮಲ ರಂಗಯ್ಯ, ಪೂರ್ವ ಅಧ್ಯಕ್ಷರುಗಳಾದ ಶೋಭಾ ಗಿರಿಧರ ಸ್ಕಂದ, ಲೀಲಾ ವಿಶ್ವನಾಥ ನಡುತೋಟ, ಜಾನಕಿ ವೆಂಕಟೇಶ್, ಅಕ್ಷತಾ ರಂಜನ್ ಕಲ್ಕುದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



