ನೆಲ್ಯಾಡಿ: ಭಾರಿ ಮಳೆ ಹಾಗೂ ಬಿರುಗಾಳಿಗೆ

ಶೇರ್ ಮಾಡಿ

ನೇಸರ ಎ.14: .13 ರಂದು ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕುಡ್ತಾಜೆಯಲ್ಲಿ ಮನೆಯೊಂದು ಹಾನಿಗೊಂಡಿರುವುದು ವರದಿಯಾಗಿದೆ.
ಕುಡ್ತಾಜೆ ನಿವಾಸಿ ಕಮಲಾಕ್ಷ ಗೌಡ ಎಂಬವರ ಮನೆಗೆ ಹಾಕಲಾಗಿದ್ದ ಸಿಮೆಂಟ್ ಶೀಟ್ ಮಳೆಗೆ ಹಾರಿಹೋಗಿದ್ದು, ಮನೆ ಸಂಪೂರ್ಣ ಕುಸಿದಿದೆ.

ಈ ವೇಳೆ ಕಮಲಾಕ್ಷ ಹಾಗೂ ಅವರ ಪತ್ನಿ, ಮಕ್ಕಳು ಮನೆಯಲ್ಲಿದ್ದು ಅಪಾಯದಿಂದ ಪಾರಾಗಿದ್ದಾರೆ. ಸುಮಾರು 50ಸಾವಿರ ರೂಪಾಯಿ ನಷ್ಟ ಆಗಿದೆ. ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪಿಲವೂರು ಅವರು ಸ್ಥಳಕ್ಕೆ ಆಗಮಿಸಿ ಕಂದಾಯ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

 

—ಜಾಹೀರಾತು—

Leave a Reply

error: Content is protected !!