ಕಡಬ: ಗೃಹಂ ಕನ್ ಸ್ಟ್ರಕ್ಷನ್ಸ್ ಶುಭಾರಂಭ

ಶೇರ್ ಮಾಡಿ

ನೇಸರ ಜೂ.04: ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ಗೃಹಂ ಕನ್ ಸ್ಟ್ರಕ್ಷನ್ಸ್ (build your dreams ಧ್ಯೇಯವಾಕ್ಯದೊಂದಿಗೆ)ಇಂದು ಶುಭಾರಂಭಗೊಂಡಿತು.

ನಿವೃತ್ತ ಶಿಕ್ಷಕರು, ಜ್ಯೋತಿಷಿ, ವಾಸ್ತು ತಜ್ಞರಾದ ಆಂಜರ ಜಿ.ಗಣಪತಿ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪಾಲಾರ್ ಕನ್ ಸ್ಟ್ರಕ್ಷನ್ಸ್ ನ ವಿಜಯ ಸುಬ್ರಮಣ್ಯ ಪಾಲಾರ್ ಲೋಗೊವನ್ನು ಬಿಡುಗಡೆಗೊಳಿಸಿ ಸತತ ಪರಿಶ್ರಮದಿಂದ ವ್ಯವಹಾರದಲ್ಲಿ ಮುಂದೆ ಬರಲು ಸಾಧ್ಯ ಎಂದು ಶುಭಕೋರಿದರು.

ಗಣೇಶ್ ಬಿಲ್ಡಿಂಗ್ ನ ಮಾಲಕರಾದ ಸುಂದರ ಗೌಡ ಉಪಸ್ಥಿತರಿದ್ದರು. ನೆಲ್ಯಾಡಿಯ ಹೋಮಿಯೋಪಥಿ ವೈದ್ಯರಾದ ಡಾ.ಅನೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಮಾಲಕರಾದ ಶ್ರೀಶ ಕುಮಾರ ಶರ್ಮ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!