ಕಾಲುವೆಯ ಕಂದಕಕ್ಕೆ ಉರುಳಿದ ಕಾರು

ಶೇರ್ ಮಾಡಿ

ನೇಸರ ಆ.14: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಉಜಿರೆಯಿಂದ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ಮುಂಡಾಜೆ ವಾಳ್ಯಕ್ಕೆ ನೀರು ಪೂರೈಸುವ ಕಿಂಡಿ ಅಣೆಕಟ್ಟಿನ ಕಾಲುವೆಯ ಕಂದಕಕ್ಕೆ ಉರುಳಿದ ಘಟನೆ ಭಾನುವಾರ ನಡೆದಿದೆ.
ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಂದಕ ಪ್ರದೇಶದಲ್ಲಿ ಯಾವುದೇ ರೀತಿಯ ತಡೆಗೋಡೆ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ.

NESARA|| WhatsApp ||GROUPS

                             

 

                                                       

 

Leave a Reply

error: Content is protected !!