ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ

ಶೇರ್ ಮಾಡಿ

ನೇಸರ ಆ.14: ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಉಜಿರೆ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆಯ ಆದಿತ್ಯವಾರದಂದು ಕೊಕ್ಕಡದ ಜೋಡುಮಾರ್ಗದಿಂದ ಶ್ರೀ ರಾಮ ಭಜನಾ ಮಂದಿರದವರೆಗೆ ನಡೆಯಿತು.

ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಕುಶಾಲಪ್ಪಗೌಡ ಮೆರವಣಿಗೆಗೆ ಚಾಲನೆ ನೀಡಿದರು.
ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಒಂದೇ ಮಾತರಂ ಜಯ ಘೋಷದೊಂದಿಗೆ ಸಾಗಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಕೊಕ್ಕಡ ಹಿಂದೂ ಜಾಗರಣ ವೇದಿಕೆ ಮಾಜಿ ವಲಯ ಅಧ್ಯಕ್ಷ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ವಹಿಸಿದ್ದರು. ಕುಶಾಲಪ್ಪ ಗೌಡ ಪೂವಾಜೆ, ಹಿರಿಯ ಸ್ವಯಂಸೇವಕ ವಿಠಲ ಭಂಡಾರಿ, ಬೆಳ್ತಂಗಡಿ ಪ್ರಖಂಡದ ವಿ.ಹಿಂ.ಪ ತಾಲೂಕು ಪ್ರಮುಖ್ ಅಖಿಲ್ ರೇಖ್ಯಾ, ರೂಪೇಶ್ ಶಿಶಿಲ, ಹಿಂ.ಜಾ‌.ವೇ ಜಿಲ್ಲಾ ಸಮಿತಿ ಸದಸ್ಯ ವಿನಯ ಕೇಚೋಡಿ ಉಪಸ್ಥಿತರಿದ್ದರು.

ದಿಕ್ಷೂಚಿ ಭಾಷಣವನ್ನು ನ್ಯಾಯವಾದಿ, ಬಿ.ಎಮ್.ಎಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗಿಶ್ ಆಲಂಬಿಲ ಸ್ವಾಗತಿಸಿ, ಕೇಶವ ಹಲ್ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು.

NESARA|| WhatsApp ||GROUPS

                             

 

                                                       

 

Leave a Reply

error: Content is protected !!