ಉಪ್ಪಿನಂಗಡಿ: ಜೇಸಿಐ ನೇತೃತ್ವದಲ್ಲಿ ಭಾಷಣ ಸ್ಪರ್ಧೆ

ಶೇರ್ ಮಾಡಿ

ನೇಸರ ಆ.14: ಗ್ರಾಮ ಪಂಚಾಯತ್ ಮತ್ತು ಸ್ವಾತಂತ್ರ್ಯೋತ್ಸವ ಸಮಿತಿ ಉಪ್ಪಿನಂಗಡಿ ವತಿಯಿಂದ ಆಯೋಜಿಸುವ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಭಾಷಣ ಸ್ಪರ್ಧೆಯನ್ನು ಸ್ಥಳೀಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.

ಈ ಭಾಷಣ ಸ್ಪರ್ಧೆಯನ್ನು ಜೇಸಿಐ ಉಪ್ಪಿನಂಗಡಿ ಘಟಕ ಸಂಘಟಿಸಿತು. ಜೇಸಿಐ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ.ಮಾ.ಹಿ ಪ್ರಾ.ಶಾಲೆ ಉಪ್ಪಿನಂಗಡಿ ಮುಖ್ಯೋಪಾಧ್ಯಯರಾದ ಹನುಮಂತಯ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವಿಚಂದ್ರ ಶಾಂತಿ, ಉಪ್ಪಿನಂಗಡಿ ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಜೇಸಿ ವಿಜಯಕುಮಾರ್ ಕಲ್ಲಳಿಕೆ ಹಾಗೂ ಜೇಸಿಐ ಘಟಕದ ಪೂರ್ವಾಧ್ಯಕ್ಷ ಜೇಸಿ ಜಯಪ್ರಕಾಶ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಕೃಷ್ಣವೇಣಿ.ಎಸ್. ರೈಯವರು ಹಾಗೂ ಜೊತೆ ಕಾರ್ಯದರ್ಶಿಯಾದ ಶ್ರೀಮತಿ ವಂದನಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ಲವೀನಾ ಪಿಂಟೊ ವಂದಿಸಿದರು. ವಿವಿಧ ಶಾಲಾ ಕಾಲೇಜು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ನಂತರ ಭಾಷಣ ಸ್ಪರ್ಧೆ ನಡೆಯಿತು.

NESARA|| WhatsApp ||GROUPS

   
                          

 

  
                                                     

 

Leave a Reply

error: Content is protected !!