

ಕಡಬ: ಎಣ್ಮೂರು ಸರಕಾರಿ ಪ್ರೌಢಶಾಲೆಯ ದೈಹಿಕಶಿಕ್ಷಣ ಶಿಕ್ಷಕ, ಕಡಬ ತಾಲೂಕು ಕೊಡಿಂಬಾಳ ಸಮೀಪದ ಕೋಡಂಕಿರಿ ಮೂಲದ ಪಿ.ಎಮ್.ರಾಮಚಂದ್ರಗೌಡ(54) ಅಲ್ಪಕಾಲದ ಅನಾರೋಗ್ಯದಿಂದ ನ.16ರಂದು ನಿಧನರಾದರು.
ರಾಮಚಂದ್ರಗೌಡ ಎಣ್ಮೂರು ಸರಕಾರಿ ಪ್ರೌಢಶಾಲೆಯ ದೈಹಿಕಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರ ಪತ್ನಿ ಕುಂತೂರುಪದವಿನ ಸೈಂಟ್ ಚಾರ್ಜ್ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ವನಿತಾ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.






