




ನೆಲ್ಯಾಡಿ: ಮಾ.20 ಹಾಗೂ 21ರಂದು ನಡೆಯಲಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಗೊನೆ ಮುಹೂರ್ತ ಶನಿವಾರದಂದು ಬೆಳಗ್ಗೆ ನಡೆಯಿತು.
ದೈವಸ್ಥಾನದ ಅರ್ಚಕ ಸುಕುಮಾರ ಯಡಪಡಿತ್ತಾಯ ಕೊಕ್ಕಡ ಗೊನೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ವಿಠಲ ರೈ ಕೊಣಾಲುಗುತ್ತು, ಸದಸ್ಯರಾದ ಜಗದೀಶ ಶೆಟ್ಟಿ ಕಡೆಂಬಿಲ, ಪ್ರಕಾಶ ಸುವರ್ಣ ಕುರುಂಬೊಟ್ಟು, ವಿಶ್ವನಾಥ ಪೂಜಾರಿ ಕಲಾಯಿ, ವಿಶ್ವಾಸ್ ಗೌಡ ಕಾಯರ್ತಡ್ಕ, ದಿನೇಶ ಗೌಡ ಕೋಲ್ಪೆ, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ಪ್ರಮುಖರಾದ ರಮೇಶ ಕಾಯರ್ತಡ್ಕ, ಲಿಂಗಪ್ಪ ಗೌಡ ದರ್ಖಾಸು, ಜಗದೀಶ ಕಾಯರ್ತಡ್ಕ, ತಾರನಾಥ ಎಣ್ಣೆತ್ತೋಡಿ, ಬಾಲಕೃಷ್ಣ ರೈ ತೋಟ, ಭಾಸ್ಕರ ರೈ ತೋಟ, ಸುಂದರ ಗೌಡ ಆರ್ಲ, ಬಾಬು ಪಿ.ಪಾಂಡಿಬೆಟ್ಟು, ಯಶವಂತ ಮರಂದೆ, ಧನುಷ್ ಕಡೆಂಬಿಲ, ನಾಗೇಶ ಗೌಡ ಮರಂದೆ, ಶ್ರೀಧರ ಪೂಜಾರಿ ಅಂಬರ್ಜೆ, ಲಿತಿನ್ ಮುಡಿಪಿನಡ್ಕ, ರಮೇಶ ಪೂಜಾರಿ ಅಂಬರ್ಜೆ, ಬಾಬು ಎಸ್. ಪಾಂಡಿಬೆಟ್ಟು, ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಅಣ್ಣಿ ಗೌಡ ಮಣ್ಣಮಜಲು, ಎಂ.ಪಿ.ಜತ್ತಪ್ಪ ಗೌಡ ಮಣ್ಣಮಜಲು, ರಾಮಣ್ಣ ಗೌಡ ಕಾಯರ್ತಡ್ಕ, ಮೋನಪ್ಪ ಗೌಡ ಎಣ್ಣೆತ್ತೋಡಿ, ಪ್ರವೀಣ ಗಾಣದಕೊಟ್ಟಿಗೆ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಎಂ.ಎಸ್.ಜತ್ತಪ್ಪ ಗೌಡ ಮಣ್ಣಮಜಲು, ಗಣೇಶ್ ಪಾಂಡಿಬೆಟ್ಟು, ಜನಾರ್ದನ ಗೌಡ ಶಾಂತಿಮಾರು, ಧರ್ಣಪ್ಪ ದಾಸ್ ಸುಪ್ರಿತನಿಲಯ, ಸದಾನಂದ ಗೌಡ ಡೆಬ್ಬೇಲಿ, ಪ್ರಸಾದ್ ರೈ ಕೊಣಾಲುಗುತ್ತು, ಮನೋಜ್ ಗೌಡ ಎಣ್ಣೆತ್ತೋಡಿ, ಪ್ರವೀಣ್ ಗೌಡ ಮಣ್ಣಮಜಲು, ರತ್ನಾಕರ ಕಾಯರ್ತಡ್ಕ, ರಾಜೇಶ್ ಕಲಾಯಿ, ವಿಶ್ವನಾಥ ದೇವಾಡಿಗ ಗಾಣದಕೊಟ್ಟಿಗೆ, ಕುಸುಮಾವತಿ ಕಾಯರ್ತಡ್ಕ, ಶೀಲಾವತಿ ಮಣ್ಣಮಜಲು, ಭವ್ಯ ಮಣ್ಣಮಜಲು, ಸ್ವಾತಿ ಮಣ್ಣಮಜಲು, ರಶ್ಮಿತಾ ಮಣ್ಣಮಜಲು, ಯಶ್ವನಿ ಕಾಯರ್ತಡ್ಕ, ಗೋಪಾಲಕೃಷ್ಣ ಮುಡಿಪಿನಡ್ಕ, ಹೊನ್ನಪ್ಪ ಗೌಡ ಮುಡಿಪಿನಡ್ಕ, ದೈವದ ಪರಿಚಾರಕರಾದ ಒಬಯ್ಯ ಪರವ ನೇರೆಂಕಿ, ನೀಲಯ್ಯ ನಲಿಕೆ ಕೊಕ್ಕಡ, ಸಂದೇಶ್ ನಲಿಕೆ ಕೊಕ್ಕಡ ಮತ್ತಿತರರು ಉಪಸ್ಥಿತರಿದ್ದರು.





