ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್; ಜಲಬಂಧನ ಮತ್ತು ವನಮಹೋತ್ಸವ

ಶೇರ್ ಮಾಡಿ

ನೇಸರ ಜೂ.27: ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಕೊಕ್ಕಡ. ಚರ್ಚ್ ಪಾಲಕರ ಹಬ್ಬದ ಆಚರಣೆ ಹಬ್ಬದ ದಿವ್ಯಬಲಿಪೂಜೆಯನ್ನು ಸೈಂಟ್ ಲಾರೆನ್ಸ್ ಶಿಕ್ಷಣ ಸಂಸ್ಥೆ ಬೊಂದೆಲ್ ಇದರ ಪ್ರಾಂಶುಪಾಲರಾದ ಫಾ.ಪೀಟರ್ ಗೊನ್ಸಾಲ್ವೀಸ್, ಫಾ.ಪ್ರಕಾಶ್ ಕೊಲಾಸೊ ದಯಾಳ್ ಭಾಗ್ ಉಜಿರೆ, ಫಾ.ಅಶೋಕ್ ಡಿಸೋಜ ಕೊಕ್ಕಡ ಹಾಗೂ ಕೊಕ್ಕಡ ಚರ್ಚ್ ಧರ್ಮಗುರು ಫಾ.ಜಗದೀಶ್ ಪಿಂಟೋ ನೆರವೇರಿಸಿದರು.

ಬಲಿಪೂಜೆ ಬಳಿಕ ಚರ್ಚಿನ ಪರಿಸರ ಆಯೋಗ ಮತ್ತು ಕಥೋಲಿಕ್ ಸಭೆ ಕೊಕ್ಕಡ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಜಲಬಂಧನ ಮತ್ತು ವನಮಹೋತ್ಸವ ಕಾರ್ಯಕ್ರಮ.
ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವದಾಖಲೆ ಮಾಡಿದ ಡೇವಿಡ್ ಜೆಮ್ಮಿ. ಚರ್ಚ್ ಪರಿಸರ ಆಯೋಗ ಸಂಚಾಲಕರು ವಿಕ್ಟರ್ ಸುವಾರಿಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಲಾರೆನ್ಸ್ ಪಾಯ್ಸ್, ಕಾರ್ಯದರ್ಶಿ ಶ್ರೀ ಪ್ರವೀಣ್ ಮೊಂತೆರೋ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಕಥೋಲಿಕ್ ಸಭಾ ಕೊಕ್ಕಡ ಘಟಕ ಕಾರ್ಯದರ್ಶಿ ಶ್ರೀಮತಿ ಬಬಿತಾ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಥೋಲಿಕ್ ಸಭಾ ಕೊಕ್ಕಡ ಘಟಕ ಅದ್ಯಕ್ಷ ಮೆಲ್ವಿನ್ ಡಿಸೋಜ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!