ಮನೆ ಅಂಗಳದಲ್ಲಿ ಬಾವಿ ಕುಸಿತ ➽ ತಪ್ಪಿದ ಅನಾಹುತ

ಶೇರ್ ಮಾಡಿ

ನೇಸರ ಜು.10: ಶಾಲೆಗುಡ್ಡೆ ನಿವಾಸಿ ನಾರಾಯಣ ಪೂಜಾರಿಯವರ ಮನೆ ಅಂಗಳದ ಎದುರಿದ್ದ ಬಾವಿಯು ಕಟ್ಟೆ ಸಮೇತ ಕುಸಿದ ಘಟನೆ ಜು.9 ರಾತ್ರಿ ಸಂಭವಿಸಿದೆ. ಗಾರೆ ಕೆಲಸ ಮಾಡುತ್ತಿರುವ ಇವರು ಪತ್ನಿ ಮಕ್ಕಳ ಜೊತೆ ಮನೆಯಲ್ಲಿರುವಾಗಲೇ ಈ ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡಿರುವುದರಿಂದ ಹೆಚ್ಚು ಹಾನಿ ಸಂಭವಿಸಿಲ್ಲ.

ಶಿಶಿಲ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದು, ಶೌರ್ಯ ವಿಪತ್ತು ತಂಡಕ್ಕೆ ತಿಳಿಸಿ, ಹೆಚ್ಚು ಹಾನಿಯಾಗದಂತೆ ಮರದ ಹಲಗೆಗಳನ್ನು ಹಾಕಿ ರಕ್ಷಣೆ ನೀಡಿದ್ದಾರೆ. ಮನೆಗೆ ಅಪಾಯವಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಬಿದ್ದಲ್ಲಿ ನಾರಾಯಣ ಪೂಜಾರಿ ಕುಟುಂಬಸ್ಥರಿಗೆ ವಾಸ್ತವ್ಯಕ್ಕೆ ಪಂಚಾಯತ್ ಕಟ್ಟಡದಲ್ಲಿ ವ್ಯವಸ್ಥೆ ಮಾಡಿ ಕೊಡುವುದಾಗಿ ಪಂಚಾಯತ್ ಅಧ್ಯಕ್ಷರು ತಿಳಿಸಿರುತ್ತಾರೆ. ಪಂಚಾಯತ್‌ನ ವತಿಯಿಂದ ನಾರಾಯಣ ಪೂಜಾರಿ ಮನೆಯವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಿರಂತರವಾಗಿ ಈ ಭಾಗದಲ್ಲಿ ಮಳೆ ಸುರಿಯುತ್ತಿರುವ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!