ಇಚ್ಚುರು -ಪುಚ್ಚೆರಿ ರಸ್ತೆಯಲ್ಲಿ ಗುಡ್ಡೆ ಕುಸಿತ

ಶೇರ್ ಮಾಡಿ

ನೇಸರ ಜು.10: ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಡಬ ತಾಲೂಕು, ನೆಲ್ಯಾಡಿ ಗ್ರಾಮದ ಇಚ್ಚುರು -ಪುಚ್ಚೆರಿ ರಸ್ತೆಯಲ್ಲಿ ಗುಡ್ಡೆ ಕುಸಿದು, ರಸ್ತೆಯ ಮೇಲೆ ಬಿದ್ದ ಪರಿಣಾಮ ಮಾರ್ಗ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಯಾಯಿತು.

ಪಂಚಾಯತ್ ಸದಸ್ಯ ಆನಂದ ಪಿಲವೂರು ನೇತೃತ್ವದಲ್ಲಿ ಜೆಸಿಬಿ ಮುಖಾಂತರ ತುರ್ತು ಕಾಮಗಾರಿ ನಡೆಸಿ ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.
ಇನ್ನು ಮಳೆ ಸುರಿದರೆ ಮತ್ತಷ್ಟು ಗುಡ್ಡೆ ಕುಸಿಯುವ ಭೀತಿಯಲ್ಲಿ ಪರಿಸರದ ಜನರು.

Leave a Reply

error: Content is protected !!