ಕೆಎಸ್ಎಸ್ ಕಾಲೇಜು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ನಡೆದ ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ

ಶೇರ್ ಮಾಡಿ

ನೇಸರ ಜು.29: ಮಂಗಳೂರು ವಿಶ್ವವಿದ್ಯಾಲಯವು ಆಜಾದಿ ಕ ಅಮೃತ್ ಮಹೋತ್ಸವದ ಪ್ರಯುಕ್ತ ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರುನಲ್ಲಿ ವಲಯ ಮಟ್ಟದ ದೇಶಭಕ್ತಿ ಗೀತೆ ಹಾಗೂ Freedom Run ಎಂಬ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಂಡಿತು.

ದೇಶಭಕ್ತಿಗೀತೆ ಯಲ್ಲಿ ನಮ್ಮ ಕಾಲೇಜಿನ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಂಧ್ಯಾ ಹೆಚ್ ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ Freedom Run – ಮ್ಯಾರಥಾನ್ ಸ್ಪರ್ಧೆಯಲ್ಲಿ ದ್ವಿತೀಯ BBA ವಿದ್ಯಾರ್ಥಿ ಸುಮಂತ್ ಹೆಚ್ಎಲ್ ತೃತೀಯ ಸ್ಥಾನವನ್ನು, ತೃತೀಯ ವಾಣಿಜ್ಯ ಪದವಿಯ ವಿದ್ಯಾರ್ಥಿನಿ ಪುನೀತ ಕೆ ಐದನೆಯ ಸ್ಥಾನವನ್ನು, ತೃತೀಯ ಬಿಎ ವಿದ್ಯಾರ್ಥಿನಿ ಹರ್ಷಿತ ಬಿ ಆರನೇ ಸ್ಥಾನವನ್ನು ಹಾಗೂ ಪ್ರಥಮ ವಾಣಿಜ್ಯ ಪದವಿಯ ವಿದ್ಯಾರ್ಥಿ ವಿಜಯಕುಮಾರ್ ಗೌಡ ಏಳನೇ ಸ್ಥಾನವನ್ನು ಪಡೆದುಕೊಂಡು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

Leave a Reply

error: Content is protected !!