ಕೊಕ್ಕಡ : ಪಿಡಬ್ಲ್ಯೂಡಿ ರಸ್ತೆಯ ಚರಂಡಿ ದುರಸ್ತಿಯಾಗದ ಹಿನ್ನೆಲೆ ಮನೆಗೆ ನುಗ್ಗಿದ ಕೆಸರು ನೀರು

ಶೇರ್ ಮಾಡಿ

ನೇಸರ ಜು.31: ರಾಜ್ಯ ಹೆದ್ದಾರಿ 37ರಕೊಕ್ಕಡ ಪೆರಿಯಾಶಾಂತಿ ರಸ್ತೆಯ ಹೂವಿನಕೊಪ್ಪಲ ಎಂಬಲ್ಲಿ ಪಿಡಬ್ಲ್ಯೂಡಿ ರಸ್ತೆಯ ಚರಂಡಿ ದುರಸ್ತಿಯಾಗದ ಹಿನ್ನೆಲೆ ಇಂದು(ಜು.31) ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ನೀರು ಮಾರ್ಗದಲ್ಲಿ ಹರಿದು ಸ್ಥಳೀಯ ನಿವಾಸಿ ಸತ್ಯನಾರಾಯಣ ಭಟ್ ರವರ ಮನೆಗೆ ಕೆಸರು ನೀರು ನುಗ್ಗಿದ್ದು ಮನೆಯ ಒಳಗಿದ್ದ ಎಲ್ಲಾ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ತೇಲಿದವು.

ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ, ಕೊಕ್ಕಡ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್ ಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಶೀಘ್ರವೇ ಚರಂಡಿ ನಿರ್ವಹಣೆ ಕಾರ್ಯ ಆರಂಭಿಸಬೇಕಾಗಿ ತಿಳಿಸಿದರು.

Leave a Reply

error: Content is protected !!