ಡಾ.ಡಿ.ವೀರೇಂದ್ರ ಹೆಗ್ಗಡೆ ರವರನ್ನು ಗೌರವಿಸಿದ ಉಜಿರೆಯ ವಿವಿಧ ಸಂಘದ ಪದಾಧಿಕಾರಿಗಳು

ಶೇರ್ ಮಾಡಿ

ನೇಸರ ಆ03: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಭಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಈ ಶುಭ ಸಂದರ್ಭದಲ್ಲಿ ಉಜಿರೆಯ ವಿವಿಧ ಸಂಘದ ಪದಾಧಿಕಾರಿಗಳು ಉಜಿರೆಯ ಶರತ್ ಕೃಷ್ಣ ಪಡ್ವೆಟ್ನಾಯರ ನೇತೃತ್ವದಲ್ಲಿ ಇಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಾಡಿ ಫಲಪುಷ್ಪಾವನ್ನು ನೀಡಿ ಗೌರವಿಸಲಾಯಿತು.

ಈ ಶುಭ ಸಂಧರ್ಭದಲ್ಲಿ ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು,ಉಜಿರೆ ಮಹಿಳಾ‌ ಮಂಡಲದ ಅಧ್ಯಕ್ಷರಾದ ಜಯಶ್ರೀ ಗೌಡ ಅಪ್ರಮೇಯ ಮತ್ತು ಸದಸ್ಯರು,ಉಜಿರೆ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ.ಆರ್.ಶೆಟ್ಟಿ, ಪಿಡಿಓ ಪ್ರಕಾಶ್ ಶೆಟ್ಟಿ ನೋಚ್ಚ ಮತ್ತು ಸಿಬ್ಬಂದಿಗಳು, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್‌.ಪೈ ಹಾಗೂ ಸದಸ್ಯರು, ಸುರಕ್ಷಾ ಮೆಡಿಕಲ್ ಮಾಲಕ ಶ್ರೀಧರ್.ಕೆ.ವಿ, ದಿಶಾ ಹೊಟೇಲ್ ಮಾಲಕ ಅರುಣ್ ಕುಮಾರ್, ಇಂಡಿಯಾನ್ ಆರ್ಥ್ ಮೂವರ್ಸ್ ಮಾಲಕ ರಾಘವೇಂದ್ರ ಬೈಪಾಡಿತ್ತಾಯ, ಅಮೃತ್ ಟೆಕ್ಸ್ ಟೈಲ್ ಮಾಲಕ ಪ್ರಶಾಂತ್ ಜೈನ್, ಜೆಸಿಐ ಅಧ್ಯಕ್ಷರಾದ ಪ್ರಸಾದ್, ಭಾರತ್ ಐರನ್ ವರ್ಕ್ಸ್ ಮಾಲಕರು, ಮಹಾವೀರ ಗ್ರೂಪ್ಸ್ ಮಾಲಕ ಪ್ರಭಾಕರ ಹೆಗ್ಡೆ, ಜಯಂತ್ ಶೆಟ್ಟಿ ಕುಂಟಿನಿ , ಶ್ರೀಧರ್ ಮರಕ್ಕಡ, ಉಜಿರೆ ಉದ್ಯಮಿ ಮೋಹನ್ ಶೆಟ್ಟಿಗಾರ್,
ಎಮ್.ಶಶಿಧರ್ ಕಲ್ಮಂಜ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಮ್.ಶ್ರೀಧರ್ ಕಲ್ಮಂಜ, ಪ್ರಕಾಶ್ ಗೌಡ ಅಪ್ರಮೇಯ, ಮಹಾಲಕ್ಷ್ಮಿ ಸ್ಟೋರ್ ಮಾಲಕ ಭರತ್ ಕುಮಾರ್, ವೆಂಕಟರಮಣ ಹೆಬ್ಬಾರ್ ಉಜಿರೆ, ಮತ್ತಿತರರು ಭಾಗವಹಿಸಿದರು.

Leave a Reply

error: Content is protected !!