ಕರಾಟೆ: ರಾಜ್ಯ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೇಸರ ಆ.07: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಇವರ ವತಿಯಿಂದ ಆ.6 ರಂದು ಬೆಳ್ತಂಗಡಿಯ ವಾಣಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ
ಬೆಳಾಲು-ಮಾಯ ಸರಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯ ವಿದ್ಯಾರ್ಥಿನಿ ಜಾಹ್ನವಿ 22-26ಕೆಜಿ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಬೆಳಾಲು ಮಾಯಾ ಹಳೆಮನೆ ಬಾಲಕೃಷ್ಣ ಗೌಡ ಮತ್ತು ಜಯಮಣಿ ದಂಪತಿ ಪುತ್ರಿ. ಈಕೆಗೆ ಮಿಥುನ್ ಕುಮಾರ್ ಬೆಳಾಲು ತರಬೇತಿ ನೀಡಿರುತ್ತಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ವಿಠ್ಠಲ ಎಂ.ತಿಳಿಸಿದ್ದಾರೆ.

Leave a Reply

error: Content is protected !!