ನೆಲ್ಯಾಡಿ ಬಸ್‌ನಿಲ್ದಾಣದಲ್ಲಿ “ಪುಸ್ತಕ ಗೂಡು” ಉದ್ಘಾಟನೆ

ಶೇರ್ ಮಾಡಿ

ನೇಸರ ಡಿ07: ನೆಲ್ಯಾಡಿ-ಕೌಕ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಆರಂಭಿಸಿರುವ ಪುಸ್ತಕ ಗೂಡು ಗ್ರಂಥಾಲಯದ ಉದ್ಘಾಟನೆ ಡಿ07 ರಂದು ನಡೆಯಿತು.


ಕಡಬ ತಾ.ಪಂ.ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಪುಸ್ತಕ ಗೂಡು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಅಬ್ಬಾಸ್, ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ತಾ.ಪಂ.ನ ಭರತ್‌ರಾಜ್, ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್, ಸಿಬ್ಬಂದಿಗಳಾದ ಕಸ್ತೂರಿ, ಪುರಂದರ, ಮಂಜುಳ, ವಿದ್ಯಾ ಬಿ,, ವಿದ್ಯಾಶ್ರೀ, ರೂಪಲತಾ, ವಿಮಲ, ಪ್ರೇಮ, ಸಂಜೀವಿನಿ ಒಕ್ಕೂಟದ ಸ್ವರ್ಣಲತಾ, ಸರಸ್ವತಿಯವರು ಉಪಸ್ಥಿತರಿದ್ದರು.ಕೌಕ್ರಾಡಿ ಗ್ರಾ.ಪಂ ಕಾರ್ಯದರ್ಶಿ ಸತೀಶ್ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!