ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ಕೊಕ್ಕಡದ ಪ್ರವೀಣ್ ಎಡಪಡಿತ್ತಾಯ

ಶೇರ್ ಮಾಡಿ

ನೇಸರ ಡಿ11: ಕೇರಳ -ತಿರುವನಂತಪುರಂದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ದಕ್ಷಿಣ ಕನ್ನಡ ಮೂಲದ ಪ್ರವೀಣ್ ಎಡಪಡಿತ್ತಾಯ ನೇಮಕಗೊಂಡಿದ್ದಾರೆ.
ಕೊಕ್ಕಡ ಸಮೀಪದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಿಲತಿಂಜ ದಿವಂಗತ ಶಂಕರನಾರಾಯಣ ಎಡಪಡಿತ್ತಾಯ ಮತ್ತು ಶ್ರೀಮತಿ ಲಲಿತ ದಂಪತಿಗಳ ಪುತ್ರ ಪ್ರವೀಣ್ ಎಡಪಡಿತ್ತಾಯ.
ಇವರು
ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಪ್ರಾಥಮಿಕ ಶಾಲೆ ಕೊಕ್ಕಡದಲ್ಲಿ, ಪ್ರೌಢಶಿಕ್ಷಣವನ್ನು ನೆಲ್ಯಾಡಿಯ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ್ದಾರೆ. ಪೌರೋಹಿತ್ಯವನ್ನು ಕಲಿತಿರುವ ಇವರು ಮೂಲತಃ ಕೃಷಿಕರಾಗಿದ್ದಾರೆ.
ಶ್ರೀಅನಂತಪದ್ಮನಾಭ ಸ್ವಾಮಿಯ ದೇವಸ್ಥಾನದಲ್ಲಿ ಹಿಂದಿನಿಂದಲೂ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಕೊಕ್ಕಡದ 8 ಕುಟುಂಬಗಳಿಗೆ ಇದೆ.ಇವರ ಅಜ್ಜ ವೆಂಕಟ್ರಮಣ ಎಡಪಡಿತ್ತಾಯ, ದೊಡ್ಡಪ್ಪ ನಾರಾಯಣ ಎಡಪಡಿತ್ತಾಯ ಹಾಗೂ ಚಿಕ್ಕಪ್ಪ ಗೋವಿಂದ ಎಡಪಡಿತ್ತಾಯ ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಪತ್ನಿ ಶ್ರೀಮತಿ ವೃಂದ, ಮಕ್ಕಳಾದ ಪೃಥ್ವಿ ಮತ್ತು ಪ್ರಾರ್ಥನಾ
.

ಜಾಹೀರಾತು

Leave a Reply

error: Content is protected !!