ಯುವಕನೋರ್ವ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅರಸಿನಮಕ್ಕಿಯ ರೆಖ್ಯ ಗ್ರಾಮದಲ್ಲಿ ನಡೆದಿದೆ

ಶೇರ್ ಮಾಡಿ

ನೇಸರ ಡಿ 12: ಆಕಸ್ಮಿಕವಾಗಿ ಯುವಕನೋರ್ವ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ರೆಖ್ಯ ಗ್ರಾಮದಲ್ಲಿ ನಡೆದಿದೆ.
ಬೂಡುತಡ್ಕ ನಿವಾಸಿ ಪ್ರತಾಪ್.ಜಿ ಹಾಗೂ ಶ್ರೀಲತಾ ದಂಪತಿಗಳ ಪುತ್ರ ಮಾನಸ್ (24) ಮೃತಪಟ್ಟ ದುರ್ದೈವಿ.
ಮಂಗಳೂರಿನ ಎಂ ಆರ್ ಪಿ ಎಲ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ತಂದೆ ಪ್ರತಾಪ್.ಜಿ ಹಾಗೂ ಮಗ ಮಾನಸ್ ಕಳೆದ ನಾಲ್ಕು ದಿನಗಳ ಹಿಂದೆ ಊರಿಗೆ ಬಂದಿದ್ದರು. ಶನಿವಾರ ಸಂಜೆ ಸ್ಥಳೀಯ ಕಾರ್ಯಕ್ರಮಕ್ಕೆಂದು ಹೋಗಿದ್ದ ಮಾನಸ್ ವಾಪಸ್ ಮನೆಗೆ ಬರಲಿಲ್ಲ. ಮನೆಯವರು ಹಾಗೂ ಸ್ಥಳೀಯರು ಎಷ್ಟೇ ಹುಡುಕಾಡಿದರೂ ಈತನ ಬಗ್ಗೆ ಮಾಹಿತಿ ಸಿಗಲಿಲ್ಲ.
ಭಾನುವಾರ ಮನೆಯ ಸಮೀಪದ ಕಾಲುದಾರಿಯ ಪಕ್ಕ ಇರುವ ಕೆರೆಯಲ್ಲಿ ಮಾನಸ್ ಮೃತ ದೇಹ ಪತ್ತೆಯಾಗಿದೆ.
ಮಾನಸ್ ಕಾಲು ಜಾರಿ ಕೆರೆಗೆ ಬಿದ್ದಿರಬಹುದೆಂದು ಅನುಮಾನಿಸಲಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

error: Content is protected !!