ಪಟ್ರಮೆ: ಮಕ್ಕಳ ಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬದ

ಶೇರ್ ಮಾಡಿ

ಪಟ್ರಮೆ: ಮಕ್ಕಳ ಕಲಿಕಾ ಚೇತರಿಕೆಗಾಗಿ ಕರ್ನಾಟಕ ಶಿಕ್ಷಣ ಇಲಾಖೆ ಆಯೋಜಿಸಿದ ಕಲಿಕಾ ಹಬ್ಬದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕ್ಲಸ್ಟರ್ ವ್ಯಾಪ್ತಿಯ ಕಿರಿಯ, ಹಿರಿಯ, ಪ್ರೌಢ ಶಾಲೆಗಳ ಕಲಿಕಾ ಹಬ್ಬವು ಪಟ್ರಮೆ ಗ್ರಾಮದ ಅನಾರು ಶಾಲೆಯಲ್ಲಿ ಇಂದು ಸಂಭ್ರಮದಿಂದ ಉದ್ಘಾಟನೆಗೊಂಡಿತು.‌

ಇಂದು ಮತ್ತು ನಾಳೆ ನಡೆಯುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಇಂದು ಬೆಳಗ್ಗೆ ಕೊಕ್ಕಡ ಕ್ಲಸ್ಟರ್ ನ ವಿವಿಧ ಶಾಲೆಗಳ ಮಕ್ಕಳ ಹುಲಿ ವೇಷ, ಗೊಂಬೆ ಕುಣಿತ ಮೊದಲಾದ ವೈವಿಧ್ಯತೆಗಳೊಡಗೂಡಿ ಅನಾರು ದೇವಸ್ಥಾನದ ಬಳಿಯಿಂದ ಅನಾರು ಆರೋಗ್ಯ ಉಪಕೇಂದ್ರದ ತನಕ ಆಕರ್ಷಕ ಮೆರವಣಿಗೆ ನಡೆದು ನಂತರ ಸಭಾ ಕಾರ್ಯಕ್ರಮ ನಡೆಯಿತು.

ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಧನಂಜಯ ಸಭಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಸಮನ್ವಯಾಧಿಕಾರಿ ಶಂಭು ಶಂಕರ್, ಮೋಹನ್, ಸಿ ಆರ್ ಪಿ ವಿಲ್ಫ್ರೆಡ್ ಪಿಂಟೋ, ಕಲಿಕಾ ಹಬ್ಬದ ಉಸ್ತುವಾರಿ ಕೊಕ್ಕಡ ಹೈಸ್ಕೂಲ್ ಮುಖ್ಯ ಶಿಕ್ಷಕರಾದ ಪ್ರಭಾಕರ್, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಶ್ಯಾಮರಾಜ್, ಗ್ರಾ.ಪಂ.ಸದಸ್ಯೆ ಶ್ರೀಮತಿ ಗಿರಿಜ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಿತೇಶ್ ಪುತ್ರನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊರೊನಾ ಅವಧಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಿದ್ದು, ಕಲಿಕೆ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಈ ಯೋಜನೆ ರೂಪಿಸಿದೆ, ಇದನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ನಾವು ವ್ಯವಸ್ಥೆಗೊಳಿಸುತ್ತಿದ್ದೇವೆ ಎಂದರು.
ಶ್ಯಾಮರಾಜ್ ಮಾತನಾಡಿ, ಕಲಿಕಾ ಹಬ್ಬ ಎಂಬ ಕಲ್ಪನೆಯೇ ಅದ್ಭುತವಾಗಿದೆ. ಇದು ಪ್ರತೀ ವರ್ಷವೂ ಮತ್ತಷ್ಟು ಹೊಸತನಗಳೊಂದಿಗೆ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸಿದರು. ಅತಿಥಿಗಳೆಲ್ಲರಿಗೂ ಅನಾರು ಶಾಲಾ ವತಿಯಿಂದ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಸಿ ಆರ್ ಪಿ ವಿಲ್ಫ್ರೆಡ್ ಪಿಂಟೋ ರವರು ಸ್ವಾಗತಿಸಿದರು. ಶಿಕ್ಷಕರಾದ ದಾಮೋದರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಧನ್ಯವಾದ ಸಮರ್ಪಿಸಿದರು.

Leave a Reply

error: Content is protected !!