ಕಾಯರ್ಪಾಡಿ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಶೇರ್ ಮಾಡಿ

ಕಾಯರ್ಪಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ವತಿಯಿಂದ ಕಾರ್ಯಾಪಾಡಿ ಒಕ್ಕೂಟದಲ್ಲಿ ಆರಂಭಗೊಂಡ ಆರಾಧನಾ ಜ್ಞಾನ ವಿಕಾಸ ಕೇಂದ್ರವು ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಕಳೆದ 23 ವರ್ಷಗಳಿಂದ ನಡೆದು ಬಂದಿದ್ದು ಕೇಂದ್ರದ ಸದಸ್ಯರು ಮಹಿಳಾ ಸಬಲೀಕರಣ, ಕೌಟುಂಬಿಕ ಸಾಮರಸ್ಯ, ವಯುಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ, ಆರ್ಥಿಕ ಸಬಲೀಕರಣ, ಕೌಶಲ್ಯಅಭಿವೃದ್ಧಿ ಮುಂತಾದ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ರೀತಿಯ ಅಭಿವೃದ್ಧಿ ಹೊಂದಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಈ ಕೇಂದ್ರಗಳಿಗೆ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ ಎಂದು ಗುರುತಿಸಿ ಪ್ರಮಾಣ ಪತ್ರವನ್ನು ಯೋಜನಾಧಿಕಾರಿಯವರಾದ ಯಶವಂತ್ ಪ್ರಮಾಣ ಪತ್ರ ನೀಡಿದರು. ಸೇವಾಪ್ರತಿನಿಧಿ ಸರೋಜ ಇವರು ಕಾರ್ಯಕ್ರಮ ನಿರೂಪಿಸಿದರು ಕೇಂದ್ರದ ಸದಸ್ಯರಾದ ಪ್ರಸನ್ನ ಭಟ್ ಧನ್ಯವಾದ ನೀಡಿದರು.

Leave a Reply

error: Content is protected !!