ದ.ಕ.ಜಿಲ್ಲೆ: 12 ಮಂದಿ ನಾಮಪತ್ರ ವಾಪಸ್; ಕಣದಲ್ಲಿ 60 ಅಭ್ಯರ್ಥಿಗಳು

ಶೇರ್ ಮಾಡಿ

ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿದ್ದ 72 ಅಭ್ಯರ್ಥಿಗಳ ಪೈಕಿ 12 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 60 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 52 ಪುರುಷ ಮತ್ತು 8 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 10 ಮಂದಿಯ ಪೈಕಿ ಕೆ.ಸುಬ್ರಹ್ಮಣ್ಯ ಭಟ್ ಮತ್ತು ನವಾಝ್ ಶರೀಫ್ ನಾಮಪತ್ರ ವಾಪಸ್ ಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ.

ಮೂಡುಬಿದಿರೆ ಕ್ಷೇತ್ರದಿಂದ 9 ಮಂದಿಯ ಪೈಕಿ ಮೆಕ್ಸಿಂ ಪಿಂಟೊ ನಾಮಪತ್ರ ವಾಪಸ್ ಪಡೆದಿದ್ದು, ಮಹಿಳೆಯ ಸಹಿತ 8 ಮಂದಿ ಕಣದಲ್ಲಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 12 ಮಂದಿಯ ಪೈಕಿ ಕಾಟಿಪಳ್ಳ ಮುಹಮ್ಮದ್ ನವಾಝ್ ಮತ್ತು ಸುಪ್ರೀತ್ ಕುಮಾರ್ ಪೂಜಾರಿ ನಾಮಪತ್ರ ವಾಪಸ್ ಪಡೆದಿದ್ದು, ಮಹಿಳೆಯ ಸಹಿತ 10 ಮಂದಿ ಕಣದಲ್ಲಿದ್ದಾರೆ.

ಮಂಗಳೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 8 ಮಂದಿಯ ಪೈಕಿ ಅಲ್ತಾಫ್ ಕುಂಪಲ, ಬಾಲಕೃಷ್ಣ ಪೂಜಾರಿ ಬೋಳಿಯಾರು, ಮುಹಮ್ಮದ್ ಅಥಾವುಲ್ಲಾ ನಾಮಪತ್ರ ವಾಪಸ್ ಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ.

ಬಂಟ್ವಾಳ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 6 ಮಂದಿಯ ಪೈಕಿ ಅಬ್ದುಲ್ ಮಜೀದ್ ಖಾನ್ ನಾಮಪತ್ರ ವಾಪಸ್ ಪಡೆದಿದ್ದು, 5 ಮಂದಿ ಕಣದಲ್ಲಿದ್ದಾರೆ.

ಪುತ್ತೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 10 ಮಂದಿಯ ಪೈಕಿ ಪಿ.ಇಬ್ರಾಹೀಂ, ಮುಹಮ್ಮದ್ ಅಶ್ರಫ್ ಕಲ್ಲೇಗ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಬ್ಬರು ಮಹಿಳೆಯ ಸಹಿತ 8 ಮಂದಿ ಕಣದಲ್ಲಿದ್ದಾರೆ.

ಸುಳ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 9 ಮಂದಿಯ ಪೈಕಿ ಸತೀಶ್ ಬಿ. ನಾಮಪತ್ರ ವಾಪಸ್ ಪಡೆದಿದ್ದು, ಇಬ್ಬರು ಮಹಿಳೆಯರ ಸಹಿತ 8 ಮಂದಿ ಕಣದಲ್ಲಿದ್ದಾರೆ.

ಮಂಗಳೂರು ನಗರ ದಕ್ಷಿಣದಲ್ಲಿ ಯಾರೂ ನಾಮಪತ್ರ ವಾಪಸ್ ಪಡೆದಿಲ್ಲ. ಹಾಗಾಗಿ ಇಬ್ಬರು ಮಹಿಳೆಯರ ಸಹಿತ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Leave a Reply

error: Content is protected !!