ಆರ್ಯಭಟ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಭಾಜನರಾದ ನೆಲ್ಯಾಡಿಯ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ

ಶೇರ್ ಮಾಡಿ

ನೆಲ್ಯಾಡಿ: ಅತ್ಯಂತ ಪ್ರತಿಷ್ಠತೆಯ ಪ್ರಶಸ್ತಿಗಳಲ್ಲಿ ಒಂದಾದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಗೆ ಆಯ್ಕೆಯಾದ ಬಹುಮುಖ ಪ್ರತಿಭೆಯ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಕಲಾವಿದ ವಿಶ್ವನಾಥ್ ಶೆಟ್ಟಿ ಕೆ.

ಪರಿಚಯ:
ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕುಂಡಡ್ಕ ದಿ.ಪಕೀರಪ್ಪ ಶೆಟ್ಟಿ ಕೆ ಮತ್ತು ದಿ. ಪೂವಕ್ಕ ಶೆಟ್ಟಿ.ಕೆ ಇವರ ಪುತ್ರ ಕಲಾರತ್ನ ಲಯನ್ಸ್ ವಿಶ್ವನಾಥ್ ಶೆಟ್ಟಿ ಕೆ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಪ್ರಾಥಮಿಕ ವಿದ್ಯಾಭ್ಯಾಸ, ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜುನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಪದವಿ ವಿದ್ಯಾಭ್ಯಾಸ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಹಿಸ್ಟರಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ,ಬಿ ಎಡ್ ಪದವಿಯನ್ನು ಇಂದಿರಾಗಾಂಧಿ ವಿಶ್ವವಿದ್ಯಾನಿಲಯ ದೆಹಲಿಯಲ್ಲಿ ಪೂರೈಸಿದ ಇವರು

ಶಾಸ್ತ್ರೀಯ ಸಂಗೀತ ಮತ್ತು ಹಾರ್ಮೋನಿಯಂ ಶಿಕ್ಷಣವನ್ನು ಗುರುಗಳಾದ ಉಡುಪಿ ವಾಸುದೇವ ಭಟ್ ಇವರಲ್ಲಿ ಕಲಿತರು.

ವೃತ್ತಿ ಬದುಕನ್ನು ಅಧ್ಯಾಪಕನಾಗಿ ಉಡುಪಿ, ಕುಂದಾಪುರ, ಹಿರಿಯಡ್ಕ ಮುಂತಾದ ಕಡೆಗಳಲ್ಲಿ ಆರಂಭಿಸಿದ ಇವರು ಪ್ರಸ್ತುತ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಕಲಾ ಕ್ಷೇತ್ರದಲ್ಲಿ ಸೇವೆ.
ಉತ್ತಮ ಗಾಯಕರಾಗಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ತುಳು ನಾಟಕ ಸಂಗೀತ ನಿರ್ದೇಶಕರಾಗಿ ಕುವೈಟ್ ಮತ್ತು ದುಬೈ ಮುಂತಾದ ಕಡೆಗಳಲ್ಲಿ ತುಳು ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುತ್ತಾರೆ.
ಅತ್ಯುತ್ತಮ ಕೀಬೋರ್ಡ್ ವಾದಕರು, ಉತ್ತಮ ಹಾಡುಗಾರರು, ನಾಟಕ ರಚನೆ ಮತ್ತು ನಿರ್ದೇಶಕರು, ಯಕ್ಷಗಾನ ಕಲಾವಿದರು. ಸಂಗೀತಾಸಕ್ತ ಮಕ್ಕಳಿಗೆ ಕೀಬೋರ್ಡ್ ಮತ್ತು ಸುಗಮ ಸಂಗೀತವನ್ನು ಕಲಿಯುವುದಕ್ಕಾಗಿ. ಲಹರಿ ಸಂಗೀತ ಕಲಾಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಇವರ ತುಳು ನಾಟಕ ಕೃತಿಗಳು:

  1. ಕೇಪುದ ಬೆಡಿ.
  2. ಮಾತೃದೇವೋಭವ.
  3. ಭೂತ ಉಂಡುಗೆ.
  4. ತೂದು ಕಲ್ಪೊಡು.

ಅನೇಕ ತುಳು ನಾಟಕಗಳ ಹಾಡುಗಳ ರಚನೆ ಹಾಗೂ ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ಆಕಾಶವಾಣಿ ಯುವವಾಣಿ ವಿಭಾಗದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಂಘ ದೆಹಲಿ ಮತ್ತು ಮುಂಬೈ ಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಾಮಾಜಿಕ ಕ್ಷೇತ್ರ:
ಅಶಕ್ತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ನೆರವು, ಕೋವಿಡ್ ನ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಹಲವಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆಹಾರ ಮತ್ತು ನೀರಿನ ವ್ಯವಸ್ಥೆ, ಪೋಲಿಸ್ ಮತ್ತು ಮೆಸ್ಕಾಂ ಮತ್ತು ಆರೋಗ್ಯ ಇಲಾಖೆ, ಸಿಬ್ಬಂದಿಗಳಿಗೆ ಅಗತ್ಯ ವಸ್ತುಗಳ ಸರಬರಾಜು. ಜೆಸಿಐ ನೆಲ್ಯಾಡಿ ಇದರ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಲಂಕಾರು ಇದರ ಸದಸ್ಯನಾಗಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗಿ. ಸೀನಿಯರ್ ಚೇಂಬರ್ ನೆಲ್ಯಾಡಿ ಇದರ ಸದಸ್ಯರಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯಾ ಕಾರ್ಯಕ್ರಮ ಅಧಿಕಾರಿಯಾಗಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಯುವ ಜನತೆಗೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಶೀರ್ಷಿಕೆಯಡಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸರಕಾರಿ ಪ್ರೌಢಶಾಲೆ ಕೊಕ್ಕಡ ಇಲ್ಲಿ ನಡೆಸಿದ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ. ಎ ಜೆ ಆಸ್ಪತ್ರೆ ಮಂಗಳೂರು ಇವರ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿ ಅನೇಕ ಸಾರ್ವಜನಿಕರು ಇದರ ಪ್ರಯೋಜನವನ್ನು ದೊರಕಿಸಿಕೊಟ್ಟ ಯಶಸ್ಸು ಇವರದ್ದು.

ಪ್ರಶಸ್ತಿಗಳು:
* ನಿರತ ಸಾಹಿತ್ಯ ಸಂಪದ ತುಂಬೆ ಹಾಸ್ಯ ಲೇಖನಕ್ಕಾಗಿ ಅಭಿನಂದನ ಪತ್ರ.
* ಬಂಟ ಪ್ರತಿಭಾನ್ವೇಷಣೆ ಭಕ್ತಿ ಗೀತೆ ಪ್ರಥಮ ಪ್ರಶಸ್ತಿ ಪತ್ರ
* it kids children techno group Awarded certificate for state level English talent Quest exam 2005-06.
* ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು
* ಕಲಾ ಪ್ರತಿಭೋತ್ಸವ 2008 ನಾಟಕ ನಿರ್ದೇಶನ ಪ್ರಶಸ್ತಿ.
* ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು. ಇವರ ನಾಟಕಕ್ಕೆ ಸಂಗೀತ ನೀಡಿರುವುದಕ್ಕಾಗಿ ಸನ್ಮಾನ ಪತ್ರ.
* Indian senior chamber Udupi temple city legion awarded first place in singing competition.
* ಹಳೆ ಮಾರಿಯಮ್ಮ ದೇವಸ್ಥಾನ ಕಾಪು ಉಡುಪಿ ಜಿಲ್ಲೆ ಭಜನಾ ಸಪ್ತಾಹದಲ್ಲಿ ಭಾಗವಹಿಸಿರುವುದಕ್ಕಾಗಿ ಪ್ರಮಾಣ ಪತ್ರ.
* ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕರ್ನಾಟಕ ಸರಕಾರ ನಡೆಸಿದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಪ್ರಶಸ್ತಿ
* junior chamber International India Belli torana certificate of participation.
* ಜೆಸಿಐ ಇಂಟರ್ನ್ಯಾಷನಲ್ ಇದರ ಅತ್ಯುತ್ತಮ ಪ್ರಶಸ್ತಿಗಳಾ ದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾ ರತ್ನ 2022 ಪ್ರಶಸ್ತಿ ಪುರಸ್ಕಾರ ಇವರಿಗೆ ಲಭಿಸಿದೆ.

ಮೇ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಆರ್ಯಭಟ ಕಲ್ಚರಲ್ ಆರ್ಗನೈಜೇಶನ್ ನ ಸ್ಥಾಪಕಾಧ್ಯಕ್ಷ ಡಾ. ಎಚ್ಎಲ್ಎನ್ ರಾವ್ ಪ್ರಕಟಣೆ ಮೂಲಕ ತಿಳಿಸಿದರು.

Leave a Reply

error: Content is protected !!