ಕಡಬ : ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚಿನ ವಾರ್ಷಿಕ ಹಬ್ಬ

ಶೇರ್ ಮಾಡಿ

ಇಚ್ಲಂಪಾಡಿ :ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ದಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್  ತೀರ್ಥಾಟನಾ  ಕೇಂದ್ರವಾದ ಸೈಂಟ್ ಜೋರ್ಜ್ ಓರ್ಥಡೊಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬವು 2023  ಮೇ ತಿಂಗಳ 1 ರಿಂದ 7 ರ ವರೆಗಿನ ದಿನಗಳಲ್ಲಿ ಬ್ರಹ್ಮಾವರ ಧರ್ಮಪ್ರಾಂತ್ಯದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ಇಡುಕ್ಕಿ ಭದ್ರಾಸನ ಮೆತ್ರಾಪೋಲೀತ್ತಾ ಅತೀ ವಂದನೀಯ ಸಖರಿಯಾ ಮಾರ್ ಸೇವೇರಿಯೊಸ್  ಇವರ ಮಹನೀಯ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ಅತೀ ವಿಜೃಂಭಣೆಯಿಂದ  ನಡೆಯಲಿರುವುದೆಂದು ಚರ್ಚ್‌ನ ಧರ್ಮಗುರು ರೆ| ಫಾ| ಪೌಲ್ ಜೇಕಬ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮೇ 6 ಮತ್ತು 7ರಂದು ಮೆರವಣಿಗೆಗೆ ಮೊದಲು ಉರುಳು ಸೇವೆಗೆ ಅವಕಾಶವಿದೆ. ಉರುಳು ಸೇವೆ ಮಾಡುವವರು ಸಭ್ಯವಾದ ಸಮವಸ್ತ್ರ ಧಾರಣೆ ಮಾಡತಕ್ಕದ್ದು. ಮೇ 7ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸರ್ವೀಸ್ ಇದೆ ಎಂದು ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್‌ರವರು ತಿಳಿಸಿದ್ದಾರೆ.

ದೇವಾಲಯದ ಕಿರು ಪರಿಚಯ

ಕರ್ನಾಟಕದಲ್ಲೇ ಅಗ್ರಗಣ್ಯವು ಪ್ರಮುಖವು ಆದ ಸಂತ ಜೋರ್ಜರ ದೇವಾಲಯವು ಕಡಬ ತಾಲ್ಲೂಕಿನ ಇಚ್ಲಂಪಾಡಿಯಲ್ಲಿ ನೆಲೆನಿಂತಿದೆ. ಅನೇಕ ಭಕ್ತರ ಶಕ್ತಿ ಹಾಗು ಭಕ್ತಿ ಕೇಂದ್ರವೂ, ದುಃಖದ ಪರಿಹಾರದ ಸಾಂತ್ವನ, ವಿಶ್ವಾಸದ ಕೇಂದ್ರವೂ ಆಗಿದೆ. ಇಲ್ಲಿ ಜಾತಿ ಮತ ಬೇಧವಿಲ್ಲದೇ ಆಗಮಿಸುವ ಭಕ್ತಾಧಿಗಳು ಅವರ ನಂಬಿಕೆಯಿಂದ ಅವರಿಗೆ ಲಭಿಸುವ ದೇವರ ಮಹಿಮೆಯು, ಅದ್ಬುತಗಳನ್ನು ಅರಿಯುವ ಸುಂದರ ನಿಮಿಷವು ಹಾಗು ಅನೇಕರಿಗೆ ಮನಸ್ಸಿನ ನೆಮ್ಮದಿಯನ್ನು ದಯಪಾಲಿಸುತ್ತಿದೆ.

ಸಂತ ಜೋರ್ಜರ ಕಿರು ಪರಿಚಯ

ಪವಾಡ ಪುರುಷ ಸೈಂಟ್ ಜೋರ್ಜ್

ಕ್ರಿಸ್ತ ಯೇಸುವಿನ ಉತ್ತಮ ಭಟನಾಗಿ ನೀನು ನನ್ನೊಂದಿಗೆ ಕಷ್ಠವನ್ನು ಸಹಿಸು (2 ತಿಮೋತಿ 2:3) ಎನ್ನುವ ಅ ಸಂತ ಪೌಲರು ತಿಮೋಥಿಗೆ ನೀಡಿದ ಆಹ್ವಾನವು ಅಕ್ಷರಾರ್ಥದಲ್ಲಿ ಎಲ್ಲಾ ವಿಧದಲ್ಲೂ ಜೀವನದ ಶೈಲಿಯನ್ನಾಗಿಸಿದ ಸಂತ ಜೋರ್ಜರು ಮೂರನೇ ಶತಮಾನದ ಉತ್ತರಾರ್ಧದಲ್ಲಿ ಕ್ರಿ.ಶ 275 ರಲ್ಲಿ ಕಪದೋಕಿಯಾದ ಕ್ರೈಸ್ತವ ಕುಟುಂಬದಲ್ಲಿ ಜನಿಸಿದರು. ತಂದೆ ಜೆರೊಂಟಿಯಾಸರಂತೆ ರೋಮನ್ ಸೇನೆಯಲ್ಲಿ ಸಮರ್ಥರಾದ ಸೈನಿಕರಾಗಿದ್ದರು. ಡಯೋಕ್ಲೀಶಿಯನ್ ಚಕ್ರವರ್ತಿಯ ಅಧಿಕಾರವಧಿಯಲ್ಲಿ ಕ್ರಿಶ್ಚಿಯನ್ನರಿಗೆ ಲಭಿಸಿದ ಪೀಡೆಗಳ ಫಲವಾಗಿ ಪಾಲೇಸ್ತೇನಿನ ಡಯಾಸ್ ಪೋಲಿಸ್ ಎಂಬಲ್ಲಿನ ಲಿಡ್ಡಾ ಎನ್ನುವ ಸ್ಥಳದಲ್ಲಿ ಕ್ರಿ.ಶ 303 ರಲ್ಲಿ ರಕ್ತ ಸಾಕ್ಷಿ ಮರಣವನ್ನು ಹೊಂದಿದರು

ಸಂತ ಜೋರ್ಜರು ಹಾಗೂ ಅಗ್ನಿ ಸರ್ಪವು

ಸಂತ ಜೋರ್ಜರ ಅದ್ಬುತಗಳಲ್ಲಿ ಶ್ರೇಷ್ಠವಾದ ಈ ಅದ್ಬುತವು ಲಿಭಿಯ ಪ್ರದೇಶದ ಸಿಲೇನ ಪಟ್ಟಣದಲ್ಲಿ ಒಂದು ದಿನ ಸೈನಿಕ ಮೇಧಾವಿಯಾಗಿದ್ದ ಇವರು ಕುದುರೆಯ ಮೇಲೆ ಯಾತ್ರೆಯಾಗಿ ಬಂದಂತಹ ಸಂದರ್ಭದಲ್ಲಿ, ಅಲ್ಲಿಯೇ ಸಮೀಪ ಬೆಟ್ಟದ ತಪ್ಪಲಲ್ಲಿ ಪಟ್ಟಣಪೂರ್ತಿ ವಿಷವಾಯು ಉಗುಳುತ್ತಾ ಮಲಿನಗೊಳಿಸುತ್ತಿದ್ದ ಒಂದು ಮಹಾ ಸರ್ಪ ಇತ್ತು. ಕೆಲವು ಪುಸ್ತಕಗಳಲ್ಲಿ ಇದು ಅಗ್ನಿಯನ್ನು ಉಗುಳಲು ಸಾಮರ್ಥ್ಯವಿರುವ ಮಹಾ ವಿಷದ ಸರ್ಪ, ಬೆಂಕಿಯ ರೆಕ್ಕೆಗಳಿರುವ ಮಹಾ ಸರ್ಪ ಎಂದೆಲ್ಲಾ ಈ ಸರ್ಪದ ಬಗ್ಗೆ ಹೇಳಲಾಗುತ್ತಿದೆ.
ಪಟ್ಟಣದ ವಾಸಿಗಳೆಲ್ಲಾ ಒಂದಾಗಿ ಈ ವಿಷ ಸರ್ಪವನ್ನು ಕೊಲ್ಲಲು ಹಲವು ಭಾರಿ ಸೈನ್ಯ ಸಮೇತ ಶ್ರಮಿಸಿದರಾದರೂ ಅತಿ ಕಠಿಣವಾದ ವಿಷವನ್ನು ಅದು ಹೊರಸೂಸುವುದರಿಂದ ಆ ಜನರು ಸ್ವ ರಕ್ಷಣೆಗಾಗಿ ಹಿಂದೆ ಸರಿಯಬೇಕಾಯಿತು. ಈ ಮಹಾಸರ್ಪವನ್ನು ಶಾಂತಗೊಳಿಸಲು ಹಾಗು ಪಟ್ಟಣಕ್ಕೆ ಪ್ರವೇಶಿಸದಿರಲು ಅವರು ದಿನಕ್ಕೆ ಎರಡು ಆಡುಗಳಂತೆ ಎಸೆದು ನೀಡ ತೊಡಗಿದರು.ಆಡುಗಳು ಮುಗಿದಾಗ ಪ್ರತಿ ಕುಟುಂಬದಿಂದ ಒಬ್ಬರಂತೆ ಚೀಟು ಹಾಕಿ ಮನುಷ್ಯರನ್ನು ಸ್ವತಃ ಬಲಿಯಾಗಲು ತೀರ್ಮಾನಿಸುತ್ತಾ ಈ ವಿಷ ಸರ್ಪದ ಭಾದೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರು. ಈ ರೀತಿಯ ದುಃಖಭರಿತ ಸನ್ನಿವೇಷದಲ್ಲಿ ಅಂದಿನ ದಿನದ ಸರದಿ ಲಭಿಸಿದ್ದು ಆ ಪಟ್ಟಣದ ರಾಜನ ಮಗಳಿಗಾಗಿತ್ತು. ಬಹಳ ದೈವಭಕ್ತೆಯು ಸುಂದರಿಯೂ ಆದ ಆ ರಾಜಕುಮಾರಿಯ ಬದಲಿಯಾಗಿ ಹೋಗದಿರಲು ಯಾರು ಒಪ್ಪದ ಕಾರಣ ರಾಜನಿಗೆ ಬಹಳ ದುಃಖವಾಯ್ತು. ಸಂತ ಜೋರ್ಜರು ಆ ದಾರಿಯಾಗಿ ಹಾದು ಹೋಗುವಾಗ ದುಃಖಭರಿತೆಯಾದ ರಾಜಕುಮಾರಿಯನ್ನು ಕಾಣುವಂತಾಯಿತು. ಆ ರಾಜನ ಅವಿವಾಹಿತೆಯಾದ ಮಗಳು ವಿವಾಹದ ತಯಾರಿಯಿಂದ ಮದುಮಗನ ಜೊತೆಯಾಗಲು ವಿವಾಹಕ್ಕಾಗಿ ಹೋಗುವ ಹಾಗೆ ವಿವಾಹದ ವಸ್ತ್ರಗಳನ್ನು ಧರಿಸುತ್ತಾ ಆಭರಣ ಭೂಷಿತೆಯಾಗಿ ಮರಣವನ್ನು ಸ್ವೀಕರಿಸಲು ದುಷ್ಟ ಅಗ್ನಿ ಸರ್ಪದ ಮುಂದೆ ದುಃಖದೊಂದಿಗೆ ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸುತ್ತಾ ಮುಂದಕ್ಕೆ ನಡೆಯತೊಡಗಿದಳು. ಶೋಕದ ಈ ಸ್ಥಿತಿಯ ತೀವ್ರತೆಯಿಂದ ಮನನೊಂದು ಪ್ರಾರ್ಥಿಸಿಕೊಂಡಿರಲು ಸಂತ ಜೋರ್ಜರು ಸಮಸ್ಯೆಯ ಪರಿಹಾರಕನು ಎನ್ನುವಂತೆ ಕುದುರೆಯ ಮೇಲೇರಿ ತನ್ನ ಕೈಯಲ್ಲಿದ್ದ ಶೂಲದಿಂದ ಆ ಮಹಾ ಸರ್ಪವನ್ನು ತಿವಿದು ಕೊಂದು ಹಾಕಿದರು. ಬಳಿಕ ಆ ಯುವತಿಯು ಹೊಂದಿದ್ದ ವಸ್ತ್ರವನ್ನು ಪಡೆದು ಆ ಮಹಾಸರ್ಪದ ಕೊರಳಿಗೆ ಸುತ್ತಿ ಕಟ್ಟಿ ಆ ಯುವತಿಗೆ ಸಮರ್ಪಿಸಿದರು. ಅವಳು ಯಾವುದೇ ಕಷ್ಠವಿಲ್ಲದೇ ಆ ಸರ್ಪವನ್ನು ಎಳೆಯುತ್ತಾ ಪಟ್ಟಣದ ಮಧ್ಯೆ ಬಂದಳು. ಆ ಮಾರಕ ಸರ್ಪವನ್ನು ಕಂಡ ಜನರು ಭಯಹೊಂದಿ ಓಡಿ ಅವಿತುಕೊಳ್ಳತೊಡಗಿದರು. “ಭಯ ಪಡಬೇಡಿ, ನೀವು ಯೇಸು ಕ್ರಿಸ್ತನಲ್ಲಿ ನಂಬಿ, ದಿವ್ಯ ಸ್ನಾನ ಹೊಂದಲು ತಯಾರಾದರೆ ನಾನು ಈ ಮಹಾ ಸರ್ಪವನ್ನು ಪೂರ್ಣವಾಗಿ ಸಾಯಿಸಬಲ್ಲೆ”. ಎಂದು ಸಂತ ಜೋರ್ಜರು ಅವರಲ್ಲಿ ಹೇಳಿದರು. ರಾಜನು ಹಾಗು ಜನರು ಬಹಳ ಸಂತೋಷದಿಂದ ಈ ಬೇಡಿಕೆಯನ್ನು ಸ್ವೀಕರಿಸಿದಾಗ ಸಂತ ಜೋರ್ಜರು ಆ ಹಾವನ್ನು ಕೊಂದು ಹಾಕಿದರು. ಆ ಮಹಾ ವಿಷ ಸರ್ಪದ ಶವ ಶರೀರವನ್ನು ದೂರಕ್ಕೆ ಕೊಂಡುಹೋಗಲು ನಾಲ್ಕು ಎತ್ತಿನ ಬಂಡಿಗಳೇ ಬೇಕಾಯ್ತು.
ಸ್ತ್ರೀ ಪುರಷರಲ್ಲದೇ ಹತ್ತು ಸಾವಿರಕ್ಕೂ ಆಧಿಕ ಜನರು ಅಂದು ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ರಾಜನು ಅನೇಕ ಸಂಪತ್ತುಗಳನ್ನು, ಕಾಣಿಕೆಗಳನ್ನು ಸಂತ ಜೋರ್ಜರಿಗೆ ನೀಡಿದರಾದರೂ ಅವನ್ನೆಲ್ಲ ಬಡವರಿಗೆ ವಿತರಿಸಲು ರಾಜನಿಗೆ ಮರಳಿ ನೀಡುತ್ತಾ, ಮರಳುವ ಸಂದರ್ಭದಲ್ಲಿ ನಾಲ್ಕು ಬೇಡಿಕೆಯನ್ನು ಇಟ್ಟರು. 1. ರಾಜನು ಕ್ರೈಸ್ತ ದೇವಾಲಯವನ್ನು ಸಂರಕ್ಷಿಸಬೇಕು. 2. ಪುರೋಹಿತರಿಗೆ ಆದರಣೆಯನ್ನು ನೀಡಬೇಕು. 3. ರಾಜನು ಪ್ರತಿ ಆರಾಧನಾ ದಿನದಲ್ಲಿ ದೇವಾಲಯದಲ್ಲಿ ಹಾಜರಿರಬೇಕು. 4. ದರಿದ್ರರಲ್ಲಿ ಕರುಣೆ ಹೊಂದಬೇಕು.

ಸಂತ ಜೋರ್ಜರ ರಕ್ತ ಸಾಕ್ಷಿ ಮರಣ

ಡಯೋಕ್ಲೀಷಿಯನ್ ಮಾಕ್ಸಿಮಸ್ ಎಂಬ ರೋಮನ್ ಚಕ್ರವರ್ತಿಯ ಕಾಲದಲ್ಲಿ ಕ್ರೈಸ್ತರು ಅನೇಕ ಪೀಡೆಗಳನ್ನು ಸಹಿಸಬೇಕಾಯ್ತು. ಹಲವರು ಸ್ವರಕ್ಷಣೆಗಾಗಿ ಕರ್ಥನ ಮೇಲಿನ ವಿಶ್ವಾಸವನ್ನು ತ್ಯಜಿಸಬೇಕಾಯ್ತು. ರಾಜನ ಅನ್ಯ ದೇವರ ಆರಾಧನೆಯನ್ನು ನಡೆಸಬೇಕು ಎನ್ನುವ ರಾಜನ ಆಜ್ಞೆಯನ್ನು ಸಾರ್ವಜನಿಕವಾಗಿ ಸಂತ ಜೋರ್ಜರು ಹರಿದು ಹಾಕಿ ಕರ್ಥನಲ್ಲಿನ ವಿಶ್ವಾಸವನ್ನು ಜೋರಾಗಿ ಪ್ರಖ್ಯಾಪಿಸಿದರು. ಹೊರಜಾತಿ ದೇವರ ಜನರ ನೇತಾರ ದೇದ್ಯಾನೋಸನು ಇವರನ್ನು ಬಂದಿಸುತ್ತಾ ಮುಂದಕ್ಕೆ ಹೋಗಲು ಸಮ್ಮತಿಸದೆ, ಸಂತ ಜೋರ್ಜರನ್ನು ಹಗ್ಗದಿಂದ ಕಟ್ಟಿ ಹಾಕಿ, ತೂಗಿ ಹೊಡೆದರು. ತದನಂತರ ಕಬ್ಬಿಣವನ್ನು ಬಿಸಿಮಾಡಿ ಶರೀರವನ್ನು ಸುಡತೊಡಗಿದರು. ಆದರೆ ಯೇಸು ಕ್ರಿಸ್ತರ ಶಕ್ತಿಯಿಂದ ಅವರು ಪೂರ್ಣ ಆರೋಗ್ಯವಾಗಿಯೇ ಇದ್ದರು. ತದನಂತರ ಮಾರಕವಾದ ವಿಷವನ್ನು ಅವರಿಗೆ ನೀಡಿದರು. ವಿಷದಿಂದ ಯಾವುದೇ ಜೀವಹಾನಿ ಸಂಭವಿಸದಿರಲು ವಿಷವನ್ನು ತಂದ ವ್ಯಕ್ತಿ ಮಾನಸಾಂತರ ಹೊಂದಿ ಕ್ರೈಸ್ತವನಾಗಿ ರಕ್ತಸಾಕ್ಷಿ ಮರಣವನ್ನು ಹೊಂದಿದರು. ಇನ್ನು ಅನೇಕ ಶಿಕ್ಷೆಗಳನ್ನು ಸಂತ ಜೋರ್ಜರಿಗೆ ನೀಡಿದರು. ಎರಡು ರಥಗಳ ಚಕ್ರಗಳಿಗೆ ಸಂತ ಜೋರ್ಜರ ಒಂದೊಂದು ಕಾಲುಗಳನ್ನು ಕಟ್ಟಿ ರಥಗಳನ್ನು ವಿಪರೀತ ದಿಕ್ಕುಗಳಿಗೆ ಓಡಿಸಲು ಶ್ರಮಿಸಿದರಾದರು ರಥವು ಚಲಿಸದೆ ತಟಸ್ಥವಾಗಿ ಹೋಯಿತು. ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಕುದಿಯುವ ಲೋಹದ ದ್ರಾವಕದಲ್ಲಿ ಹಾಕಿಸಿದನು. ಇದರಿಂದಲೂ ಸಂತ ಜೋರ್ಜರಿಗೆ ಯಾವುದೇ ದೋಷವು ಸಂಭವಿಸಲಿಲ್ಲ. ಪೀಡೆಗಳು ಯಾವುದೂ ಫಲಿಸುವುದಿಲ್ಲ ಎಂದು ಅರಿತ ದೇದ್ಯಾನೋಸನು, ಸಂತ ಜೋರ್ಜರನ್ನು ಅನ್ಯ ದೇವರ ಮುಂದೆ ನಿಲ್ಲಿಸಿ ಆ ದೇವರನ್ನು ಆರಾಧಿಸಲು, ಬಲಿ ನೀಡಲು ಪ್ರೇರೇಪಿಸಿದನು. ಸಂತ ಜೋರ್ಜರು ಸೋಲುವುದನ್ನು ಕಾಣಲು ನಗರದ ಜನಗಳೆಲ್ಲ ಕೂಡಿದ್ದರು. ಸಂತ ಜೋರ್ಜರು ಜೋರಾಗಿ ಕರ್ಥನಲ್ಲಿ ಪ್ರಾರ್ಥನೆಯನ್ನು ಮಾಡಿದರು. ಕೂಡಲೇ ಆಕಾಶದಿಂದ ಬೆಂಕಿ ಬಂದು ಆ ಕ್ಷೇತ್ರದ ಕಟ್ಟಡಗಳು, ವಿಗ್ರಹಗಳು, ಪುರೋಹಿತರು ಬೆಂದು ನಶಿಸಿ ಹೋದರು. ಭೂಮಿ ಬಾಯ್ದೆರೆದು ಅವರನ್ನು ನುಂಗಿತು. ಇದನ್ನು ಕಂಡ ದೇದ್ಯಾನೋಸನ ಮಡದಿ ಅಲೆಕ್ಸಾಂಡ್ರ ಕರ್ಥನಲ್ಲಿ ನಂಬ ತೊಡಗಿದಳು. ಸಂತ ಜೋರ್ಜರನ್ನು ಪೀಡಿಸಿ ಜನರನ್ನು ಭಯಗೊಳಿಸಿ ಕ್ರಿಸ್ತನನ್ನು ನಂಬಿದ ವಿಶ್ವಾಸಿಗಳನ್ನು ತಡೆಯುವದು ಸಾಧ್ಯವಾಗದರಿಂದ ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಖಡ್ಗದಿಂದ ಕಡಿದು ಕೊಲ್ಲಿಸಿ ಶಿರಸ್ಸನ್ನು ಛೇಧಿಸಿದನು. ಆದರೂ ಅನೇಕರು ಕ್ರಿಸ್ತನಲ್ಲಿ ನಂಬಿದರು. ಸಂತ ಜೋರ್ಜರನ್ನು ವಧಿಸಿದ ಸ್ಥಳದಿಂದ ನಿರ್ಗಮಿಸಿದಾಗ ದೇದ್ಯಾನೋಸನು ಸಂತ ಜೋರ್ಜರನ್ನು ಪೀಡಿಸಿದ ಅದೇ ಜಾಗದಲ್ಲಿ ಬೆಂಕಿಗಾಹುತಿಯಾದನು.

ಪಾಶ್ಚಾತ್ಯ ಹಾಗು ಪೌರಸ್ತ್ಯ ಸಭೆಗಳು ನಾಲ್ಕನೇ ಶತಮಾನದಿಂದ ಸಂತ ಜೋರ್ಜರ ಸ್ಮರಣೆಯ ಹಬ್ಬವನ್ನು ಎಪ್ರಿಲ್ 23 ನೇ ತಾರೀಖಿನಂದು ಆಚರಣೆ ಮಾಡಲು ತೊಡಗಿದರು.

Malayalam Version

വിശുദ്ധ ഗീവര്‍ഗ്ഗീസ് സഹദാ

ക്രിസ്തു യേശുവിന്റെ നല്ല ഭടനായി നീ എന്നോടൊപ്പം കഷ്ടം സഹിക്കുക ( 2 തിമോത്തിയോസ് 2:3) എന്നുള്ള പ.പൗലോസ് ശ്ലീഹായുടെ ആഹ്വാനം അക്ഷരാര്‍ത്ഥത്തില്‍ ജീവിത ശൈലിയാക്കിയ വിശുദ്ധ ഗീവര്‍ഗ്ഗീസ് സഹദാ മൂന്നാം നൂറ്റാണ്ടിലെ ഉത്തരാർദ്ധത്തിൽ (എ.ഡി 275-ല്) കപ്പദോക്യായിലെ ക്രൈസ്തവ കുടുംബത്തിൽ ജനിച്ചു. പിതാവ് ജെരൊന്റിയോസ് റോമന് സൈന്യത്തിലേ സമര്‍ത്ഥനായ ഭടനായിരുന്നു.ഡയോക്ലീഷ്യയന് ചക്രവർത്തിയുടെ അധികാര കാലായളവിൽ ക്രിസ്ഥിയാനികള്‍ അനുഭവിച്ച പീഡയുടെ ഫലമായി പാലസ്തീനിലെ ഡയാസ്പ്പോലീസിലെ ലിഡ്ഡാ എന്ന സ്ഥലത്തിലാണ് എ.ഡി 303- ല് സഹദാ രക്തസാക്ഷി മരണം പ്രാപിച്ചത്

വിശുദ്ധ ഗീവര്‍ഗ്ഗീസ് സഹദായും അഗ്നിസര്‍പ്പവും

വിശുദ്ധ ഗീവര്‍ഗ്ഗീസ് സഹദായുടെ ചരിത്രങ്ങളിൽ വളരെ ശ്രേഷ്ഠമായ അദ്ഭുതമാണ് ഇത്. ലിബിയ പ്രദേശത്ത് മലയുടെ താഴ്‌വരയിൽ, ആ പട്ടണം മുഴുവന് വിഷവായു തുപ്പി മലിനമാക്കികൊണ്ടിരുന്ന ഒരു സര്പ്പം ഉണ്ടായിരുന്നു.ചില പുസ്തകങ്ങൾ ഇത് അഗ്നിയെ തുപ്പുവാൻ സാമര്‍ത്ഥ്യമുള്ള മഹാ വിഷസർപ്പം എന്നും രേഖപ്പെടുത്തിയിരിക്കുന്നു.
പട്ടണ വാസികളെല്ലാവരും ഒന്നായി ഈ വിഷസർപ്പത്തെ കൊല്ലുവാന്‍ പല പ്രാവശ്യം സൈന്യത്തോടൊപ്പം ശ്രമിച്ചുവെങ്കിലും അതി കഠിനമായ വിഷം അതു പുറന്തള്ളുന്നതിനാൽ ആ ജനങ്ങൾ സ്വരക്ഷയ്ക്കായി പിന്തിരിയേണ്ടിവന്നു.
ഈ രീതിയിലെ ദുഃഖമേറിയ സാഹചര്യത്തില്‍ അന്നത്തെ നറുക്ക് വീണത് ആ പട്ടണത്തിലെ രാജാവിന്റെ മകൾക്കായിരുന്നു. വളരെ സുന്ദരിയും ദൈവഭക്തയും അവിവാഹിതയും ആയിരുന്നുവെങ്കിലും ആരും അവള്‍ക്ക്‌ പകരമായി മരിക്കുവാൻ തയ്യാറായില്ല. ഇതു രാജാവിനെ വളരെ അധികം ദുഃഖിപ്പിച്ചുവെങ്കിലും ആ രാജാവ് മകളെ കല്യാണ വസ്ത്രങ്ങൾ ഉടുപ്പിച്ച് മണവാളനെ എതിരേൽക്കുവാൻ പോകുന്ന മണവാട്ടിയെപ്പോലെ ഒരുക്കി ദുഃഖത്തോടെ മരണത്തെ സ്വീകരിക്കുവാന്‍ മനസ്സില്ലാ മനസ്സോടെ അയച്ചു. രാജകുമാരി ദുഃഖത്തോടെ കർത്താവിനോട് പ്രാർത്ഥിച്ചുകൊണ്ട് പോകുമ്പോള്‍ ആ വഴി കടന്നു വന്ന ഗീവര്‍ഗ്ഗീസ് സഹദാ, ദുഃഖിതയായിരുന്ന രാജകുമാരിയുടെ രക്ഷകനായി എത്തി. കുതിരപ്പുറത്തായിരുന്ന സഹദാ തന്‍റെ കൈയ്യിലെ കുന്തംകൊണ്ട് ആ മഹാ സർപ്പത്തെ കുത്തി കൊന്നു. ആ രാജകുമാരിയുടെ ഇടകെട്ടു വാങ്ങി സഹദാ ആ മഹസര്‍പ്പത്തിന്‍റെ കഴുത്തിൽ കെട്ടി അവളുടെ കൈയ്യിൽ കൊടുത്തു. അവള്‍ യാതൊരു പ്രയാസവും ഇല്ലതെ അതിനെ വലിച്ചുകൊണ്ട് പട്ടണ മധ്യത്തിലേക്ക് എത്തി. ആ മാരക സർപ്പത്തെ കണ്ട ജനങ്ങൾ ഭയംകൊണ്ട് ഓടി ഒളിക്കുവാൻ തുടങ്ങി. “ഭയപ്പെടേണ്ട, നിങ്ങൾ കർത്താവിൽ വിശ്വസിച്ച് മാമോദിസാ സ്വീകരിക്കുവാണെങ്കിൽ ഞാന് ആ സർപ്പത്തെ പൂര്ണ്ണമായി കൊല്ലാം” എന്നു സഹദാ പറഞ്ഞപ്പോൾ രാജാവും ജനങ്ങളും സഹദായുടെ അപേക്ഷയെ പൂർണ്ണ മനസ്സോടെ സമ്മതിച്ചു.ആ മഹാ വിഷ സർപ്പത്തിന്റെ ശവം മുറിച്ച് കൊണ്ടുപോകുവാന്‍ നാൽ കാള വണ്ടി തന്നെ വേണമായിരുന്നു.
സ്ത്രീ പുരുഷന്മാരെ കൂടാതെ പതിനായിരത്തിലധികം ജനം മാമോദിസാ മുങ്ങി കർത്താവിൽ വിശ്വസിച്ചു. രാജാവു അനേക സമ്പത്തും കാണിക്കകള്‍ നൽകിയെങ്കിലും അതെല്ലാം പാവപ്പെട്ടവർക്ക് വിതരണം ചെയ്യുവാന്‍ രാജാവിനെ മടക്കി ഏൽപിച്ചിട്ട് നാൽ ആവശ്യങ്ങൾ സഹദാ രാജാവിനോട് പറഞ്ഞു. 1. രാജാവ് ക്രിസ്തീയ പള്ളികളെ സംരക്ഷിക്കണം. 2. പുരോഹിതന്മാരെ ബഹുമാനിക്കണം. 3. രാജാവ് എല്ലാ ആരാധനാ ദിവസങ്ങളിലും ദേവാലയത്തിൽ സന്നിഹിതനാകണം. 4. ദരിദ്രരോടും പാവപ്പെട്ടവരോടും കരുണ കാണിക്കണം.

ഗീവരുഗ്ഗീസ് സഹദായുടെ രക്ത സാക്ഷി മരണം

ഡയോക്ലീഷ്യയന്‍ മാക്സിമസ് എന്ന റോമന്‍ ചക്രവര്‍ത്തിയുടെ കാലത്ത് ക്രിസ്തിയാനികള്‍ അനേക പീഡകള്‍ സഹിക്കേണ്ടി വന്നു. പലരും സ്വരക്ഷയ്ക്കായി കര്‍ത്താവിനോടുള്ള വിശ്വാസത്തെ ത്യജിക്കേണ്ടി വന്നു. അന്യ ദൈവങ്ങളെ ആരാധിക്കണം എന്നുള്ള രാജ കൽപനയെ പൊതുജന മധ്യത്തില്‍ സഹദാ പരസ്യമായി കീറി കര്‍ത്താവിനോടുള്ള വിശ്വാസത്തെ വെളിപ്പെടുത്തി. പുറജാതി ക്ഷേത്രത്തിലെ ഭരണത്തലവനായ ദേദ്യാനോസ് സഹദായെ ബന്ധിയാക്കി കെട്ടിയിട്ട് തൂക്കി അടിച്ചിട്ട ശേഷം ചുട്ടു പഴുപ്പിച്ച ഇരുമ്പ് ദണ്ഡ് കൊണ്ട് കുത്തുകയും, മാരകമായ വിഷം നല്‍കിയെങ്കിലും സഹദായ്ക്ക് ഒന്നും ബാധിക്കാത്തത് കണ്ട് വിഷം കൊണ്ടു വന്ന ആള്‍ മാമോദിസാ മുങ്ങി കര്‍ത്താവില്‍ വിശ്വസിച്ചു. അനേകം ശിക്ഷകളെ സഹദാ അനുഭവിക്കേണ്ടി വന്നു. രണ്ട് രഥങ്ങളൂടെ ചക്രത്തില്‍ ഒരോ കാലിനെ കെട്ടി വിരുദ്ധ ദിക്കിലേക്ക് ചലിപ്പിക്കുവാന്‍ ശ്രമിച്ചുവെങ്കിലും രഥം അനങ്ങാതെ നിന്നു. കോപത്തോടെ ദേദ്യാനോസ് സഹദായെ തിളയ്ക്കുന്ന ഈയത്തിന്‍റെ ദ്രാവകത്തിലേക്ക് ഇട്ടു. സഹദായ്ക്ക് ഒന്നും സംഭവിച്ചില്ല ഇതു കണ്ട ദേദ്യാനോസ് അന്യ ദൈവങ്ങളുടെ മുമ്പാകെ ആരാധന നടത്തുവാന്‍ സഹദായോട് ആവശ്യപ്പെട്ടു. സഹദാ തോല്‍ക്കുന്നത് കാണാന്‍ വലിയ ഒരു ജനസമൂഹം തന്നെ കൂടിയിരുന്നു. സഹദാ ഉറക്കെ കര്‍ത്താവിനോട് പ്രാര്‍ത്ഥിച്ചു. ഉടനെ ആകാശത്തില്‍നിന്ന് തീ വീഴുകയും ആ ക്ഷേത്രത്തിലെ കെട്ടിടങ്ങള്‍, വിഗ്രഹങ്ങള്‍, പുരോഹിതര്‍ എന്നിവ വെന്ത് നശിച്ചു പോയി. ഇതു കണ്ട ദേദ്യാനോസിന്‍റെ ഭാര്യ കര്‍ത്താവില്‍ വിശ്വസിച്ചു. സഹദായെ പീഡിപ്പിച്ച് ജനങ്ങളെ പേടിപ്പിച്ച് ജനങ്ങള്‍ ക്രിസ്തുവില്‍ വിശ്വസിക്കുന്നത് തടയുവാന്‍ സാധിക്കാത്ത ദേദ്യാനോസ് വാള്‍ കൊണ്ട് വെട്ടി സഹദായുടെ ശിരച്ഛേദം ചെയ്തു. എങ്കിലൂം അനേകര്‍ കര്‍ത്താവില്‍ വിശ്വസിച്ചു. സഹദായെ വധിച്ച സ്ഥലത്തില്‍ നിന്ന് തിരിച്ചു പോകുവാന്‍ കഴിഞ്ഞില്ല. ദേദ്യാനോസ് അതേ സ്ഥലത്തു വച്ചുതന്നെ തീയ്ക്കിരയായി.
പാശ്ചാത്യ പൗരസ്ത്യ സഭകള്‍ നാലാം നൂറ്റാണ്ട് മുതല്‍ വിശുദ്ധ ഗീവര്‍ഗ്ഗീസ് സഹദായുടെ ഓര്‍മ്മ പെരുന്നാള്‍ എപ്രില്‍ 23 തീയതി ആഘോഷിക്കുവാന്‍ തുടങ്ങി.
നീതിമാന്‍റെ ഓര്‍മ്മ വാഴ്വ്വിന്നായി ത്തീരും ( സദൃ 10:7)

വിശുദ്ധ ഗീവര്‍ഗ്ഗീസ് സഹദായേ ഞങ്ങള്‍ക്ക് വേണ്ടി അപേക്ഷിക്കണമെ.

ವಾರ್ಷಿಕ ಹಬ್ಬ

ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ದಿ ಹೊಂದಿರುವ ಸಂತ ಜೋರ್ಜರ ಹಬ್ಬವು ಪ್ರತೀ ವರ್ಷ ಮೇ 1 ರಿಂದ ಆರಂಭವಾಗಿ ಮೇ 6 ಹಾಗು 7 ರಂದು ಅತೀ ವಿಜೃಂಭಣೆಯಿಂದ ನಡೆಯುವುದು. ಮೇ 1 ರ ದಿವ್ಯ ಬಲಿ ಪೂಜೆಯ ನಂತರ ಧ್ವಜಾರೋಹಣದ ಮೂಲಕ ಈ ಐತಿಹಾಸಿಕ ಹಬ್ಬ ಪ್ರಾರಂಭಗೊಂಡು ಪ್ರತಿದನ ದಿವ್ಯ ಬಲಿಪೂಜೆಯ ನಂತರ ಧ್ಯಾನ ಪ್ರಾರ್ಥನೆ ನಿರಂತರವಾಗಿ ನಡೆಯುತ್ತದೆ. ಮೇ 6 ರಂದು ಸಂಧ್ಯಾ ಪ್ರಾರ್ಥನೆ ಹಾಗು ಮೆರವಣಿಗೆ ಹಾಗು ಮೇ 7 ರಂದು ದಿವ್ಯ ಬಲಿಪೂಜೆ ಧರ್ಮಾಧ್ಯಕ್ಷರುಗಳ ನೇತೃತ್ವದಲ್ಲಿ ನಡೆಯುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿವ್ಯ ಬಲಿ ಪೂಜೆಯ ನಂತರ ಹರಕೆಗಳ ನೆರವೇರಿಸುವಿಕೆ ಪ್ರಾರಂಭವಾಗುತ್ತದೆ. ತದನಂತರ ಏಲಂ ಮೆರವಣಿಗೆ ಹಾಗೂ ಆಶೀರ್ವಾದದೊಂದಿಗೆ ಮುಕ್ತಾಯವಾಗುವ ಹಬ್ಬದಲ್ಲಿ ಭಕ್ತವೃಂದಕ್ಕೆ ಹಬ್ಬದ ಪ್ರಸಾಧವಾದ ಅಪ್ಪ ಹಾಗು ಕೋಳಿ ಪದಾರ್ಥವನ್ನು ಎಲ್ಲರಿಗೂ ಹಂಚಲಾಗುತ್ತದೆ. ಸಂತ ಜೋರ್ಜರ ಮುಂದೆ ಕೈ ಜೋಡಿಸಿ ಪರಿಪೂರ್ಣ ಭಕ್ತಿ ಹಾಗು ಅಚಲ ವಿಶ್ವಾಸದಿಂದ ಬೇಡಿದವರ ಉದ್ದಿಷ್ಠ ಕಾರ್ಯ ಸಫಲವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ಎನ್ನುವದಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿಗಾಗಮಿಸುತ್ತಿರುವ ವೃಧಿಸುತ್ತಿರುವ ಭಕ್ತರ ಸಂಖ್ಯೆಯೇ ಸಾಕ್ಷಿ.

ಹರಕೆಗಳು

ಇಲ್ಲಿ ವಿವಿಧ ತೆರನಾದ ಕಾಣಿಕೆಗಳನ್ನು ಸಲ್ಲಿಸುವುದು, ಶಿಲುಭೆ ಹಿಡಿದು ಮೆರವಣಿಗೆ ಹೋಗುವುದು , ಉರುಳು ಸೇವೆ, ಮೊಣಕಾಲ ಮೇಲೆ ನಡೆಯುವುದು , ಮೇಣದ ಬತ್ತಿ ಉರಿಸುವುದು, ಕೋಳಿ ಹಾಗೂ ಅಪ್ಪವನ್ನು ಹರಕೆಯಾಗಿ ತರುವುದು , ಮಕ್ಕಳನ್ನು ದೇವರ ಮುಂದೆ ಸಮರ್ಪಿಸಿ ಪ್ರಾರ್ಥಿಸುವುದು , ವಿವಿಧ ತೆರನಾದ ಆರೋಗ್ಯದ ಸಮಸ್ಯೆಗಳಿಂದ ಕಾಡುತ್ತಿರುವ ಮಕ್ಕಳನ್ನು ಸಂತ ಜೋರ್ಜರ ಮಧ್ಯಸ್ಥಿಕೆಯಿಂದ ಸಮರ್ಪಿಸಿ ಪ್ರಾರ್ಥಿಸುವುದು , ದೇವಾಲಯದ ಆರಾಧನೆಗಾಗಿ ಬೇಕಾದ ವಸ್ತುಗಳನ್ನು ನೀಡುವುದು , ದಿವ್ಯ ಬಲಿ ಪೂಜೆಗೆ ಹಾಗು ಇತರ ಪ್ರಾರ್ಥನೆಗಳಿಗೆ ಪ್ರಾರ್ಥನೆಗಾಗಿ ಹೆಸರನ್ನು ನೀಡುವುದು , ವಿವಿದ ತೆರನಾದ ಸಮಸ್ಯೆಗಳಿಗೆ ತದರೂಪವನ್ನು ನೀಡಿ ಪ್ರಾರ್ಥಿಸುವದು ಮುಂತಾದ ರೀತಿಯ ಹರಕೆಗಳನ್ನು ಪ್ರಧಾನವಾಗಿ ಇಲ್ಲಿ ಸಲ್ಲಿಸಲಾಗುತ್ತದೆ. ಇಲ್ಲಿನ ಹಬ್ಬದ ಪೂಜೆಯನ್ನು ವಹಿಸಲು ಅವಕಾಶವನ್ನು ನೀಡಲಾಗುತ್ತದೆ.
ಸಂತ ಜೋರ್ಜರ ಮಧ್ಯಸ್ಥಿಕೆಯ ಪ್ರಾರ್ಥನೆಗೆ ಎಲ್ಲರೂ ಭಕ್ತಿ ಪೂರ್ವಕ ಪಾಲ್ಗೊಳ್ಳುತ್ತಾರೆ . ಕೆಲವು ಸಮಸ್ಯೆಗಳಿಗೆ ಪ್ರತ್ಯೇಕ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ ದೇವಾಲಯದ ದಿವ್ಯ ಬಲಿಪೂಜೆಯ ಪರಮ ಪ್ರಸಾದವು ಓರ್ಥಡೊಕ್ಸ್ ವಿಶ್ವಾಸಿಗಳಿಗೆ ಮಾತ್ರ ಸೀಮಿತವಾಗಿದೆಯಾದರೂ ಎಲ್ಲರಿಗೂ ಪೂಜೆಗೆ ಪಾಲ್ಗೊಂಡು ಸಹಕರಿಸಲು ಬೇಕಾದ ಎಲ್ಲಾ ಅನುಕೂಲತೆಗಳನ್ನು ದೇವಾಲಯದಿಂದ ಮಾಡಲಾಗುತ್ತದೆ. ಇಲ್ಲಿ ಅನೇಕರು ಕೋಳಿಗಳನ್ನು ಇಷ್ಠಾರ್ಥ ಸಿದ್ದಿಗಾಗಿ ತರುವದು ಸಂಪ್ರದಾಯವಾಗಿದೆ. ಆದರೆ ಇಲ್ಲಿ ಹರಕೆಗಾಗಿ ತರುವ ಕೋಳಿಗಳನ್ನಾಗಲೀ ಯಾವುದನ್ನು ಬಲಿ ನೀಡುವುದಿಲ್ಲ ಅಥವಾ ರಕ್ತ ಬಲಿಯ ಸಂಪ್ರಧಾಯವು ಈ ದೇವಾಲಯಕ್ಕೆ ಇಲ್ಲ. ಇಲ್ಲಿನ ಕೋಳಿ ಹರಕೆಯನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡವರೂ ಇದ್ದಾರೆ. ಇಲ್ಲಿ ಲಭಿಸುವ ಕೋಳಿಗಳನ್ನು ಬರುವ ಜನರಿಗೆ ಕೋಳಿ ಪದಾರ್ಥವಾಗಿ ಅಪ್ಪದೊಂದಿಗೆ ಹಬ್ಬದ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಣೆ ಮಾಡುವ ಸಂಪ್ರದಾಯವಿದೆ. ಉಳಿದ ಕೋಳಿಗಳನ್ನು ಏಲಂ ನಡೆಸಲಾಗುವದು. ಹೀಗೆ ಬಹುತೇಕ ಹರಕೆಗಳು ವಿಶ್ವಾಸ ಶುದ್ದಿಯಿಂದ ನಡೆಸಲ್ಪಡುವುದು..
ಅನೇಕರು ದುಷ್ಠ ಶಕ್ತಿಗಳಿಂದ ರಕ್ಷಣೆಗಾಗಿ, ಸರ್ಪ  ದೋಷ ನಿವಾರಣೆಗಾಗಿ, ಕ್ಷುದ್ರ ಜೀವಿಗಳು, ಕೃಷಿಯಲ್ಲಿನ ಕ್ರಿಮಿಕೀಟಗಳ ಬಾಧೆಗಳಿಂದ ಬಳಲುತ್ತಿರುವವರು, ಹವಾಮಾನ ವೈಪರೀತ್ಯಗಳಿಂದ ಕೃಷಿಗಳಲ್ಲಿ ಸಂಕಷ್ಠಗಳನ್ನು ಎದುರಿಸುತ್ತಿರುವವರು, ಕೃಷಿಹಾನಿ ಸಂಭವಿಸಿದವರು, ರುಣಾತ್ಮಕ ಶಕ್ತಿಗಳಿಂದ ಬಳಲುತ್ತಿರುವವರು,ಕುಟುಂಬ, ಜೀವನ, ಉದ್ಯೋಗ, ವಾಣಿಜ್ಯ, ವ್ಯವಸಾಯಗಳಲ್ಲಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳು, ಅನ್ಯಾಯಗಳಿಂದ ಬಳಲುತ್ತಿರುವವರು, ನ್ಯಾಯಕ್ಕಾಗಿ, ಕಳ್ಳತನದ ಸುಳ್ಳರಿಂದ ಬೇಸತ್ತಿರುವವರು, ಶೈಕ್ಷಣಿಕ ಸಮಸ್ಯೆ ಅನುಭವಿಸುತ್ತಿರುವವರು, ಶೋಷಣೆಯಿಂದ ಸಂರಕ್ಷಣೆಗೆ ಹೀಗೆ ನಾನಾ ವಿಧವಾದ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೆ ಸ್ವಯಂ ಆಗಿಯೇ ಹರಕೆ ಹೇಳುವುದು , ಹರಕೆ ಈಡೇರಿಸುವುದು ಹಾಗೂ ಸಮರ್ಪಣೆ ಹರಕೆಗಳ ರೀತಿಯಾಗಿದೆ. ಹರಕೆಗಳನ್ನು ನೀಡುವದರಲ್ಲಿ ಅನೇಕರಿಗೆ ದೇವರ ಅನುಗ್ರಹವು ಲಭಿಸಿರುವುದು , ಲಭಿಸುತ್ತಿರುವುದು ವೃದ್ದಿಸುತ್ತಿರುವ ಭಕ್ತವೃಂದವೇ ಸಾಕ್ಷಿಯಾಗಿದೆ.

ಜಾಹೀರಾತು

Leave a Reply

error: Content is protected !!